ಮೋಪೆಡ್ ಗೆ ಕಾರು ಡಿಕ್ಕಿ- ಸಹ ಅರ್ಚಕ ಕೃಷ್ಣ ಭಟ್ ಮೃತ

ಉಚ್ವಿಲ: ಮೋಪೆಡ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಚ್ವಿಲ ರಾಷ್ಟ್ರೀಯ ಹೆದ್ದಾರಿ 66 ಶ್ರೀ ರಸ್ತು ಹೊಟೇಲ್ ಮುಂಭಾಗ ಭಾನುವಾರ ಸಂಜೆ ಘಟಿಸಿದೆ.ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕ್ವಿಡ್ ಕಾರು ಮೋಪೆಡ್ ಸವಾರ ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದ ಸಹ ಅರ್ಚಕ ಕೃಷ್ಣ ಭಟ್(83 ) ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡರು. ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲುಸಿದ್ದು, ಚಿಕಿತ್ಸೆ ಫಲಕಾರಿ ಆಗದೆ ಮದ್ಯಾಹ್ನ ಮೃತಪಟ್ಟಿದ್ದಾರೆ. ಮೃತ ಕೃಷ್ಣ ಭಟ್ ರವರು ಹೆಂಡತಿ, ಇಬ್ಬರು ಗಂಡು ಮಕ್ಕಳನ್ನು ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply