ಕುಂಜತ್ತಬೈಲ್ ಉತ್ತರವಾರ್ಡಿನ ದೇವಿನಗರ ರಸ್ತೆ ಅಭಿವೃದ್ಧಿ ಶಾಸಕ ಡಾ.ಭರತ್ ಶೆಟ್ಟಿಯಿಂದ ಲೋಕಾರ್ಪಣೆ

ಮಂಗಳೂರು : ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ 13 ನೇ ಕುಂಜತ್ತಬೈಲ್ ಉತ್ತರ ವಾರ್ಡಿನ ದೇವಿನಗರ ರಸ್ತೆಯನ್ನು 10 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾಗಿದ್ದು, ಶಾಸಕ ಡಾ.ವೈ ಭರತ್ ಶೆಟ್ಟಿಯವರು ಭಾನುವಾರ ಉದ್ಘಾಟಿಸಿದರು.

ಸ್ಥಳೀಯ ಕಾರ್ಪೋರೇಟರ್ ಶರತ್ ಕುಮಾರ್, ಶಕ್ತಿ ಕೇಂದ್ರ ಅಧ್ಯಕ್ಷ ಗಣೇಶ್ ಕುಲಾಲ್, ಬೂತ್ ಕಾರ್ಯದರ್ಶಿ ನಿತೇಶ್ ಕುಮಾರ್, ಮಂಡಲ ಯುವ ಮೋರ್ಚಾದ ವರುಣ್ ಶೇಣವ ಹಾಗೂ ಪ್ರಶಾಂತ್ ಶೆಟ್ಟಿ, ಅಮೃತ್ ದೇವಿನಗರ, ಪ್ರಮುಖರಾದ ಯೋಗೀಶ್ ಕಿರೋಡಿಯನ್, ರಂಜಿತ್ ಕುಲಾಲ್, ದಿಲೀಪ್, ಅಶೋಕ್ ಕುಮಾರ್, ಪ್ರಶಾಂತ್ ದೇವಿನಗರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply