ಅಲೆವೂರಿನ ವಾರದ ಸಂತೆ ಇಂದು ಉದ್ಘಾಟನೆ

ಉಡುಪಿ: ಉತ್ತಮ ಗುಣಮಟ್ಟದ ವಸ್ತುಗಳನ್ನು ನ್ಯಾಯೋಚಿತ ಬೆಲೆಗೆ ಸಂತೆಗೆ ಬರುವ ಗ್ರಾಹಕರಿಗೆ ನೀಡಿ ವಿಶ್ವಾಸಗಳಿಸಿ ಎಂದು ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಂಚನ್ ವ್ಯಾಪಾರಿಗಳಿಗೆ ಹೇಳಿದರು.

ಗ್ರಾಮಪಂಚಾಯತ್ ವ್ಯಾಪ್ತಿಯ ಕೊರಂಗ್ರಪಾಡಿ ವಿಜಯ ಬ್ಯಾಂಕ್ ಬಳಿ ಪ್ರತೀ ಮಂಗಳವಾರ ನಡೆಯಲಿರುವ ವಾರದ ಸಂತೆಯನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಅಭಿವೃದ್ಧಿ ಹೊಂದುತ್ತಿರುವ ಕೊರಂಗ್ರಪಾಡಿ ಗ್ರಾಮದಲ್ಲಿ ಗ್ರಾಮಪಂಚಾಯತಿನ ನೂತನ ಆಡಳಿತ ಇನ್ನಷ್ಟು ಮಾದರಿ,ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಹಾರೈಸಿದರು.

ನಗರ ಸಭಾ ಸದಸ್ಯ ವಿಜಯ ಪೂಜಾರಿ,ಅಲೆವೂರು ಗ್ರಾಮಪಂಚಾಯತ್ ಉಪಾಧ್ಯಕ್ಷ ಸುಧಾಕರ ಪೂಜಾರಿ ,ಮಾಜಿ ಅಧ್ಯಕ್ಷರಾದ ಅಲೆವೂರು ಹರೀಶ್ ಕಿಣಿ,ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಶೆಟ್ಟಿ,ಶ್ಯಾಮಲ ಸುಧಾಕರ್,ಮನಮೋಹನ್,ಲಿಸ್ವಿಟಾ ಡೇಸಿ ಅಮ್ಮನ್ನ,ಅಮೃತಾ ಯು ಪೂಜಾರಿ,ಯತೀಶ್ ಕುಮಾರ್,ಜಲೇಶ್ ಶೆಟ್ಟಿ,ರೂಪೇಶ್ ದೇವಾಡಿಗ,ಶಬರೀಶ್ ಸುವರ್ಣ,ರೇಣುಕ ಶೆಟ್ಟಿ,ಗೀತಾ ಶೆಟ್ಟಿಗಾರ್ ಸ್ಥಳೀಯ ಪ್ರಮುಖರಾದ ರಾಘ ಕೋಟ್ಯಾನ್,ವಸಂತ ಕೋಟ್ಯಾನ್,ಶ್ರೀಮತಿ ಬೇಬಿ ಮೊದಲಾದವರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವದ್ಧಿ ಅಧಿಕಾರಿ ದಯಾನಂದ ಬೆನ್ನೂರ್ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 

Leave a Reply