ಅಗ್ನಿವೀರ್ ರ್ಯಾಲಿಗೆ ತೆರಳಲ್ಲಿರುವವರಿಗೆ ಟೀಮ್ ನೇಶನ್ ಫಸ್ಟ್ ವತಿಯಿಂದ ಅಗ್ನಿಸೇತು ತರಬೇತಿಯನ್ನು ಅಜ್ಜರಕಾಡು ಕ್ರೀಡಾಂಗಣದಲ್ಲಿ ಅಗಸ್ಟ್ 7 ರಿಂದ ಆರಂಭಿಸಿದ್ದು, ಇಂದು ದಿನಾಂಕ 14-08-2022 ರಂದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಅಗ್ನಿಸೇತು ತರಬೇತಿಯನ್ನು ಪಡೆಯುತ್ತಿರುವವರಿಗೆ ಶುಭಾಶಯ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಜಿಲ್ಲಾ ಬಿಜೆಪಿ ಕೋಶಾಧಿಕಾರಿಗಳಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರೋಷನ್ ಶೆಟ್ಟಿ ಮತ್ತು ಟೀಮ್ ನೇಶನ್ ಫಸ್ಟ್ ತಂಡ ಸೂರಜ್ ಉಪಸ್ಥಿತರಿದ್ದರು.