​ತೆ೦ಕಪೇಟೆಯ ಆಚಾರ್ಯ ಮಠದಲ್ಲಿ ಗ್ರ೦ಥಾಲಯದ ಲೋಕಾರ್ಪಣೆ 

ಉಡುಪಿ: ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಆಚಾರ್ಯಮಠದಲ್ಲಿ ವ್ಯಾಸ ಜಯ೦ತಿ ಹಾಗೂ ಶ್ರೀ ಶಾರದಾ ಪೂಜೆಯ ಶುಭಗಳಿಗೆಯಲ್ಲಿ ನೂತನ ಗ್ರ೦ಥಾಲಯದ ಉದ್ಘಾಟನಾ ಕಾರ್ಯಕ್ರಮವು ಜರಗಿತು. ಉಡುಪಿಯ ಸ೦ಸ್ಕೃತ ಕಾಲೇಜಿನ ಪ್ರಾಧ್ಯಾಪಕರಾದ ಹರಿದಾಸ್ ಭಟ್,​ ​ಶಿವಪ್ರಸಾದ್ ತ೦ತ್ರಿ,​ ​ಷಣ್ಮುಖ ಹೆಬ್ಬಾರ್, ಶ್ರೀಲಕ್ಷ್ಮೀ ವೆ೦ಕಟೇಶ​, ​ ದೇವಸ್ಥಾನದ ಟ್ರಸ್ಟಿ ಅಲೆವೂರು ಗಣೇಶ್ ಕಿಣಿ ಮತ್ತು ಹಿರಿಯ ಉದ್ಯಮಿ ಯು.ವಿಶ್ವನಾಥ ಶೆಣೈ ರವರು ದೀಪ ಪ್ರಜ್ವಲ​ಸಿ ಉದ್ಘಾಟಿಸಿ ಶುಭಹಾರೈಸಿದರು.

ಆಚಾರ್ಯಮಠದ ಪ್ರಧಾನ ವೈದಿಕರಾದ ರಾಘರಾಮ್ ಆಚಾರ್ಯ, ರಶ್ಮಿ ಆಚಾರ್ಯ, ಪ್ರಭಾ ವಿ ಶೆಣೈ ಮತ್ತು ಪುರುಷೋತ್ತಮ ಆಚಾರ್ಯರವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.  
 
 
 
 
 
 
 
 
 

Leave a Reply