ಬೈಕ್‌ ಡಿಕ್ಕಿ; ಪಾದಚಾರಿ ಸ್ಥಳದಲ್ಲೇ ಸಾವು

ಪಾದಚಾರಿಗೆ ಬೈಕ್‌ ಡಿಕ್ಕಿಯಾಗಿ ಸ್ಥಳದಲ್ಲೇ ಪಾದಚಾರಿ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ಕೊಪ್ಪಲಂಗಡಿ ಬಳಿ ನಡೆದಿದೆ.

ಕಾಪು ಕೊಪ್ಪಲಂಗಡಿ ನಿವಾಸಿ  ಕಿಶೋರ್ ಶೆಟ್ಟಿ ಮೃತಪಟ್ಟವರು. ಉಡುಪಿಯಿಂದ ಪಡುಬಿದ್ರಿ ಕಡೆ ಸಂಚರಿಸುವಾಗ ಬೈಕ್‌ ರಸ್ತೆ ಬದಿ ನಿಂತಿದ್ದ ಕಿಶೋರ್‌ ಶೆಟ್ಟಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್‌ ಸವಾರನಿಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply