ಸಿಡಿ​ಲಿನಿಂದ ಮೃತಪಟ್ಟ ಕುಟುಂಬಕ್ಕೆ ರೂ. 5 ಲಕ್ಷ ಚೆಕ್ ವಿತರಣೆ

ಇತ್ತೀಚೆಗೆ ಸಿಡಿಲು ಬಡಿತದಿಂದ  ಉಡುಪಿ ನಗರದ ಕೊಡವೂರು ವಾರ್ಡ್ ನಿವಾಸಿ ಗೌತಮ್ ಮೃತಪಟ್ಟಿರುತ್ತಾರೆ. ಮೃತರ ಕುಟುಂಬಕ್ಕೆ ಪ್ರಾಕೃತಿಕ ವಿಕೋಪ ನಿಧಿಯಡಿ ಪರಿಹಾರ ನೀಡುವಂತೆ ಶಾಸಕ ರಘುಪತಿ ಭಟ್ ಶಿಫಾರಸು ಮಾಡಿರುತ್ತಾರೆ. ಅದರಂತೆ ಪ್ರಾಕೃತಿಕ ವಿಕೋಪ ನಿಧಿಯಡಿ ಮಂಜೂರಾದ ರೂ. 5 ಲಕ್ಷ ಮೊತ್ತದ ಚೆಕ್ ಇಂದು ​ಶನಿವಾರ ಶಾಸಕಕೆ ರಘುಪತಿ ಭಟ್ ರವರು ಗೌತಮ್ ಮನೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್, ಪೋಲಿಸ್ ಉಪ ಅಧೀಕ್ಷಕರಾದ ಜೈಶಂಕರ್, ಮಲ್ಪೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ತಿಮ್ಮೇಶ್ ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply