ಉಡುಪಿ: ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷರಾಗಿ ಜಾದೂಗಾರ, `ಗಿಲಿ ಗಿಲಿ’ ಖ್ಯಾತಿಯ ಪ್ರೊ. ಶಂಕರ್ ಹಾಗೂ ಗೌರವಾಧ್ಯಕ್ಷರಾಗಿ ಉದ್ಯಮಿ ವಿಶ್ವನಾಥ ಶೆಣೈ ಆಯ್ಕೆಯಾಗಿದ್ದಾರೆ.
ಇಲ್ಲಿನ ರಾಮ ಭವನ ಹೋಟೆಲ್ ಸಂಕಿರ್ಣದಲ್ಲಿ ಈಚೆಗೆ ನಡೆದ ಪ್ರತಿಷ್ಠಾನದ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದ ಆಯ್ಕೆ ನಡೆಯಿತು
ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರು- ಮರವಂತೆ ನಾಗರಾಜ ಹೆಬ್ಬಾರ್ ,ಜೀವನರಾಂ ಸುಳ್ಯ, ಸಂಧ್ಯಾ ಶೆಣೈ ,ವಿಘ್ನೇಶ್ವರ ಅಡಿಗ ,ಸುಗುಣ ಸುವರ್ಣ ಮತ್ತು ಮಧುಸೂದನ ಹೆರೂರು, ಪ್ರಧಾನ ಕಾರ್ಯದರ್ಶಿ- ಗಿರೀಶ್ ತಂತ್ರಿ, ಜೊತೆ ಕಾರ್ಯದರ್ಶಿಗಳು- ಶಿಲ್ಪಾ ಜೋಷಿ, ಅಮಿತಾಂಜಲಿ ಕಿರಣ್ ಮತ್ತು ಜನಾರ್ದನ ಹಾವಂಜೆ ಹಾಗೂ ಖಜಾಂಚಿ- ರಾಜೇಶ್ ಭಟ್ ಪಣಿಯಾಡಿ, ಕಾನೂನು ಸಲಹೆಗಾರ- ಶಶಿರಾಜ್ ಕಾವೂರು , ಸಂಚಾಲಕ- ರವಿರಾಜ ಎಚ್. ಪಿ ಹಾಗೂ ವಿಶೇಷ ಆಹ್ವಾನಿತರಾಗಿ ವಿವೇಕಾನಂದ ಎನ್., ಸೋಮನಾಥ ಚಿಟ್ಪಾಡಿ , ಪೂರ್ಣಿಮಾ ಜನಾರ್ದನ್, ವಿದ್ಯಾ ಶ್ಯಾಮಸುಂದರ್ ,ಸುಮಿತ್ರಾ ಕೆರೆಮಠ , ರಂಜಿತಾ ಶೇಟ್, ಪದ್ಮಾಸಿನಿ ಉದ್ಯಾವರ , ಶೃತಿ ಕಾಶಿ, ರಾಧಿಕಾ ಭಟ್, ಮಹೇಶ್ ಮಲ್ಪೆ ಮತ್ತು ನಿತಿನ್ ಪೆರಂಪಳ್ಳಿ ಆಯ್ಕೆಯಾಗಿದ್ದಾರೆ.