ರೋಟರಿ ಉಡುಪಿ ರಾಯಲ್ ಮತ್ತು ಸಹಕಾರ ಭಾರತಿಯಿಂದ  ವನಮಹೋತ್ಸವ 

ಭಾನುವಾರ ದಿನಾಂಕ 2 ಆಗಸ್ಟ್ ರಂದು  ರೋಟರಿ ಕ್ಲಬ್ ಉಡುಪಿ ರಾಯಲ್ ಮತ್ತು ಸಹಕಾರ ಭಾರತಿ ಉಡುಪಿ ಇವರ ಸಹಭಾಗಿತ್ವದಲ್ಲಿ ಇಂದ್ರಾಳಿ ಮಂಚಿ ಸೀತಾರಾಮ್ ನಾಯಕ್ ರವರ ಜಾಗದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಸ್ಥಳೀಯ ನಗರಸಭಾ ಸದಸ್ಯ ಅಶೋಕ್ ನಾಯ್ಕ್ ಇಂದ್ರಾಳಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
 
ರಾಯಲ್ ಅಧ್ಯಕ್ಷ ಮಂಜುನಾಥ್ ಮಣಿಪಾಲ, ಕಾರ್ಯದರ್ಶಿ ಗುರುಪ್ರಸಾದ್ ಪಾಲನ್, ಸದಸ್ಯರಾದ ಸುಬ್ರಮಣ್ಯ ಪೈ, ಸತೀಶ್ ಎನ್, ಲಕ್ಷ್ಮಿ ಪ್ರಕಾಶ್, ಉಡುಪಿ ಸಹಕಾರ ಭಾರತಿ ಅಧ್ಯಕ್ಷ ದಿನೇಶ್ ಹೆಗ್ಡೆ ಅತ್ರಾಡಿ, ಸ್ಥಳೀಯ ಗಣ್ಯರಾದ ಲೋಕಯ್ಯ, ಅರವಿಂದ ಶೆಟ್ಟಿ, ಸೀತಾರಾಮ್ ನಾಯಕ್, ಸುಧೀರ್ ನಾಯಕ್, ಗಣೇಶ್ ನಾಯಕ್, ಮಾಧವ್ ನಾಯಕ್, ಸಂದೀಪ್ ನಾಯಕ್ ಹಾಜರಿದ್ದರು. ರಾಯಲ್ ಸ್ಥಾಪಕ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಕಾರ್ಯಕ್ರಮ ಸಂಘಟಿಸಿದರು.
 
 
 
 
 
 
 
 
 
 
 

Leave a Reply