ಕುಂಜಿಬೆಟ್ಟು, ಉಪೇಂದ್ರ ಪೈ ಮೆಮೊರಿ ಯಲ್ ಕಾಲೇಜಿನ ವಿದ್ಯಾರ್ಥಿಗಳಾದ ರೀನಾಜ್, ಶೈಮಾ, ಮನಿಷಾ ಕುಂದರ್, ಸುಷ್ಮಾ ಕೆ.ಸಿ, ಶಮಾ ಅಮ್ರ, ಸ್ನೇಹ ನಾಯಕ್ ಇವರು ಶ್ರೀ ರಾಮಚಂದ್ರ ಮಿಷನ್ ಯುನೈಟೆಡ್ ನೇಶನ್ಸ್ ಇನ್ಫಾರ್ಮೇಶನ್ ಸೆಂಟರ್ ಮತ್ತು ಹರ್ಟ್ ಫುಲ್ ನೆಸ್ ಎಜುಕೇಶನ್ ಟ್ರಸ್ಟ್ ಇಂಡಿಯಾ ಮತ್ತು ಭೂತಾನ್ ವತಿಯಿಂದ ನಡೆಸಿದ ‘ಹರ್ಟ್ ಫುಲ್ನೆಸ್ ಎಸ್ಸೆ ಈವೆಂಟ್’ ಎಂಬ ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ರವರು ಪ್ರಮಾಣ ಪತ್ರವನ್ನು ವಿತರಿಸಿ, ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ. ಜಿ ಉಪಸ್ಥಿತರಿದ್ದರು.