ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿ. ಶಾಖಾ ವ್ಯವಸ್ಥಾಪಕರ ಬೀಳ್ಕೊಡುಗೆ ಸಮಾರಂಭ

ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನಲ್ಲಿ33 ವರ್ಷ ಸೇವೆ ಸಲ್ಲಿಸಿದ ಶ್ರೀ ಸಿ.
ಪ್ರಕಾಶ್‌ರವರು ಇತ್ತೀಚೆಗೆ ಶಾಖಾ ವ್ಯವಸ್ಥಾಪಕರಾಗಿ ನಿವೃತ್ತಿಗೊಂಡ
ಸoಧರ್ಭದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು.
ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯರವರು ಶ್ರೀ ಸಿ.
ಪ್ರಕಾಶ್ ಹಾಗೂ ಶ್ರೀಮತಿ ಚಿತ್ರಲೇಖ ದಂಪತಿಗಳನ್ನು ಸನ್ಮಾನಿಸಿದರು.
ಉಪಾಧ್ಯಕ್ಷರಾದ ಶ್ರೀ ಪಿ. ರಾಘವೇಂದ್ರ ಭಟ್, ನಿರ್ದೇಶಕರಾದ ಶ್ರೀ ಭಾಸ್ಕರ್
ರಾವ್ ಕಿದಿಯೂರು, ಶ್ರೀ ಎನ್. ಸೂರ್ಯಪ್ರಕಾಶ್ ರಾವ್, ಶ್ರೀ ಎನ್. ಪ್ರಹ್ಲಾದ್
ಬಲ್ಲಾಳ್, ಶ್ರೀಮತಿ ಮನೋರಮಾ ಎಸ್., ಬ್ಯಾಂಕಿನ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಶ್ರೀ ಎಸ್. ಕುಮಾರಸ್ವಾಮಿ ಉಡುಪ, ಸಹಾಯಕ
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ವಿಷ್ಣುಮೂರ್ತಿ ಆಚಾರ್ಯ, ಶಾಖಾ
ವ್ಯವಸ್ಥಾಪಕರಾದ ಶ್ರೀ ಎ. ರಾಘವೇಂದ್ರ ಹೆಬ್ಬಾರ್ ಹಾಗೂ ಸಿಬ್ಬಂದಿ
ವರ್ಗದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply