ಜನರ ನಿರೀಕ್ಷೆೆಯಂತೆ ಮಾಧ್ಯಮ ಕೆಲಸ ಮಾಡಲಿ: ಸಿಎಂ ಸಲಹೆ

ಉಡುಪಿ, ನ.7: ಜನರ ಮನಸ್ಸಿಿನ ಆಶೋತ್ತರ ಹಾಗೂ ನಿರೀಕ್ಷೆೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಮಾಧ್ಯಮಗಳು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಿ ಬಸವರಾಜ ಬೊಮ್ಮಾಾಯಿ ತಿಳಿಸಿದರು.

ಮಣಿಪಾಲ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್‌ನಿಂದ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ನಡೆದ ಮಣಿಪಾಲದಲ್ಲಿ ಅರಳಿದ ಪತ್ರಿಿಕಾ ರಂಗದ ಧೀಮಂತ ಸಾಧಕರ ಶತಮಾನೋತ್ತರ ಸಂಸ್ಮರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊೊಂಡು ಮಾತನಾಡಿದರು.

ಸ್ವಾಾತಂತ್ರ್ಯ ಹೋರಾಟದಲ್ಲಿ ಭಾರತದ ಪತ್ರಿಿಕೆಗಳ ಪಾತ್ರ ಬಹಳ ದೊಡ್ಡದು. ಮಾಧ್ಯಮಗಳಿಲ್ಲದ ಸಂದರ್ಭದಲ್ಲಿ ಬಹಳಷ್ಟು ಪತ್ರಿಿಕೆಗಳು ಕರಪತ್ರಿಿಕಗಳಾಗಿ ಬರುತ್ತಿಿದ್ದವು. ಮಹಾತ್ಮಾಾ ಗಾಂಧೀಜಿ ಅವರೂ ಕೂಡ ಪತ್ರಿಿಕೆಗಳ ಮೂಲಕವೇ ತಮ್ಮ ಸಂದೇಶವನ್ನು ಪತ್ರಿಿಕೆಗಳ ಮೂಲಕವೇ ತಿಳಿಸುತ್ತಿಿದ್ದರು. ಅಂಥ ಸಂದರ್ಭದಲ್ಲಿ ಕರಾವಳಿ ಭಾಗದ ಪಾತ್ರ ಮಹತ್ವದ್ದು. ಕರ್ನಾಟಕದ ಮೊದಲ ಪತ್ರಿಿಕೆ ಪ್ರಾಾರಂಭವಾಗಿದ್ದೇ ಮಂಗಳೂರಿನಿಂದ. ಮೊದಲನೇ ಪತ್ರಿಿಕೆ ಇಲ್ಲಿ ಹಟ್ಟಬೇಕಾದರೆ, ದೂರದೃಷ್ಟಿಿಯಿರುವ ಚಿಂಕತರು, ಅದನ್ನು ಬರಹದಲ್ಲಿ ಅಭಿವ್ಯಕ್ತಿಿ ಮಾಡುವ ಸಾಹಿತಿಗಳು ಮತ್ತು ದೇಶ ಪ್ರೇಮ ಈ ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಬೆಳೆದಿದೆ ಎನ್ನುವುದು ಎದ್ದು ಕಾಣುತ್ತದೆ. ಎಂದರು.

ಟಿ.ಎಂ.ಎ. ಪೈ ಅವರು ಮಣಿಪಾಲ ಪ್ರೆೆಸ್ ಪ್ರಾಾರಂಭಿಸಿ ಮಣಿಪಾಲಷ್ಟೇ ಅಲ್ಲದೇ ಭಾರತದಲ್ಲಿಯೇ ದೊಡ್ಡ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ರಾಾಂತಿಯನ್ನು ಮಾಡಿದ್ದಾಾರೆ. ಮಣಿಪಾಲ ಇಂದು ಶಿಖರದೆತ್ತರಕ್ಕೇ ಬೆಳೆದಿರುವುದು ಹೆಮ್ಮೆೆ ಪಡುವ ವಿಚಾರ ಎಂದ ಮುಖ್ಯಮಂತ್ರಿಿಗಳು ಇದಕ್ಕೆೆ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಿದರು.
ಪ್ರಜಾಪ್ರಭುತ್ವದ ಉಳಿವಿನಲ್ಲಿ ಪತ್ರಿಿಕೆಗಳ ಪಾತ್ರ
ಪ್ರಜಾಪ್ರಭುತ್ವದ ವ್ಯವಸ್ಥೆೆಯಲ್ಲಿ ಪತ್ರಿಿಕೋದ್ಯಮ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಜಾಪ್ರಭುತ್ವ ಜೀವಂತವಾಗಿದ್ದರೆ ಅದಕ್ಕೆೆ ಪತ್ರಿಿಕೆಗಳು ಹಾಗೂ ವಿದ್ಯುನ್ಮಾಾನ ಮಾಧ್ಯಮ ಕಾರಣ. ಆನರಿಗೆ ಈ ದೇಶದಲ್ಲಿ, ರಾಜ್ಯದಲ್ಲಿ, ಊರಿನಲ್ಲಿ ಏನಾಗುತ್ತಿಿದೆ ಎಂಬ ಬಗ್ಗೆೆ ಮಾಹಿತಿ ಇದ್ದಾಾಗ ಮಾತ್ರ ನಮ್ಮ ದೇಶದ ಬಗ್ಗೆೆ ಜಾಗೃತಿ ಹಾಗೂ ಕಳಕಳಿ ಉಂಟಾಗಲು ಸಾಧ್ಯವಿದೆ. ಈ ಹಿನ್ನೆೆಲೆಯಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಪತ್ರಿಿಕೋದ್ಯಮ ಬಹಳ ದೊಡ್ಡ ಪಾತ್ರವನ್ನು ವಹಿಸಿದೆ ಎಂದರು.
ರಾಜಕಾರಣಿಗಳು ಮತ್ತು ಪತ್ರಿಿಕೆಗಳ ಅವಿನಾಭಾವ ಸಂಬಂಧ
ರಾಜಕಾರಣಿಗಳು ಮತ್ತು ಪತ್ರಿಿಕೆಗಳದ್ದು ಅವಿನಾಭಾವ ಸಂಬಂಧ. ನಿಮ್ಮನ್ನು ಬಿಟ್ಟು ನಾವು, ನಮ್ಮನ್ನು ಬಿಟ್ಟು ನೀವು ಇರಲು ಸಾಧ್ಯವಿಲ್ಲ. ರಾಜಕೀಯ ಸುದ್ದಿಇಲ್ಲದೆ ಪತ್ರಿಿಕೆಗಳು ಸಪ್ಪೆೆಯಾಗಿರುತ್ತವೆ. ರಾಜಕಾರಣಿಗಳೂ ಸಹ ಪತ್ರಿಿಕೆಗಳಿಗೆ ರಜೆ ಇದ್ದರೆ ಒದ್ದಾಾಡುವಂತಾಗುತ್ತದೆ. ನಾವು ಹೇಳವುದು ಜನರಿಗೆ ಮುಟ್ಟಿಿಸುವ ಕೆಲಸ ಮಾಧ್ಯಮಗಳು ಮೂಲಕವೇ ಆಗುತ್ತದೆ. ಇದೊಂದು ರೀತಿಯಲ್ಲಿ ಗಂಡಹೆಂಡತಿಯ ಸಂಬಂಧವಿದ್ದಂತೆ. ಒಬ್ಬರಿಗೊಬ್ಬರು ಇರಲೇಬೇಕಾಗುತ್ತದೆ ಎಂದರು.
ಟೀಕೆಗಳಿಂದ ಎಚ್ಚರಿಕೆಯ ಹೆಜ್ಜೆೆಯಿಡಲು ಸಾಧ್ಯ
ಪ್ರಜಾಪ್ರಭುತ್ವದ ಭಾರತದಲ್ಲಿ ಪತ್ರಿಿಕೆಗಳು ನಮ್ಮನ್ನು ಸದಾ ಕಾಲ ಹೊಗಳುತ್ತಿಿರಬೇಕೆಂದು ನಿರೀಕ್ಷೆೆ ಮಾಡುವುದು ದಡ್ಡತನ. ಪತ್ರಿಿಕೆಗಳು ಜಾಗೃತಿ ಮೂಡಿಸಲೆಂದೇ ಇದೆ. ಹಾಗಿದ್ದಾಾಗಲೇ ಆಡಳಿತ ಮಾಡುವವರಿಗೆ ಎಚ್ಚರಿಕೆಯ ನಡೆ ಇಡಲು ಸಾಧ್ಯವಾಗುತ್ತದೆ. ಟೀಕೆಗಳನ್ನು ಸ್ವಾಾಗತಿಸಬೇಕು. ಸುಧಾರಣೆಗೆ ಅವಕಾಶಗಳೂ ಸಹ ಇರುತ್ತದೆ. ಪತ್ರಿಿಕೆಗಳಲ್ಲಿ ಬರುವ ಟೀಕೆಟಿಪ್ಪಣಿಗಳಿಂದಲೇ ಹಲವಾರು ನಿರ್ಣಯಗಳನ್ನು ಕೈಗೊಂಡು ಸುಧಾರಣೆಗಳನ್ನು ತಂದಿದ್ದೇವೆ ಎಂದರು.
ತರಂಗ ವಾರಪತ್ರಿಿಕೆಯ ವ್ಯವಸ್ಥಾಾಪಕ ಸಂಪಾದಕಿ ಡಾ ಸಂಧ್ಯಾಾ ಎಸ್. ಪೈ ಅವರು ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ವಿ.ಸುನಿಲ್ ಕುಮಾರ್, ಎಸ್.ಅಂಗಾರ, ಶಾಸಕ ಕೆ. ರಘುಪತಿ ಭಟ್, ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಎಂಜಿಎಂ ಕಾಲೇಜು ಟ್ರಸ್‌ಟ್‌‌ನ ಅಧ್ಯಕ್ಷರಾದ ಟಿ. ಸತೀಶ್ ಪೈ, ಎಂಟಿಎಲ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಗೌತಮ್ ಎಸ್. ಪೈ, ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ ಎಚ್.ಎಸ್.ಬಲ್ಲಾಾಳ್, ಎಂಎಂಎನ್‌ಎಲ್‌ನ ಆಡಳಿತ ನಿರ್ದೇಶಕ ಹಾಗೂ ಸಿಇಒ ವಿನೋದ್ ಕುಮಾರ್ ಉಪಸ್ಥಿಿತರಿದ್ದರು.
ಉದಯವಾಣಿ ಸಂಪಾದಕ ಅರವಿಂದ ನಾವಡ ಅವರು ಪ್ರಸ್ತಾಾವನೆಗೈದರು. ಎಚ್.ಆರ್. ವಿಭಾಗದ ವ್ಯವಸ್ಥಾಾಪಕಿ ಉಷಾರಾಣಿ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಎಂಜಿಎಂ ಕಾಲೇಜಿನ ಪ್ರಾಾಂಶುಪಾಲ ಪ್ರೊೊ ಲಕ್ಷ್ಮೀನಾರಾಯಣ ಕಾರಂತ ವಂದಿಸಿದರು.

 
 
 
 
 
 
 
 
 
 
 

Leave a Reply