ಮಹಿಳೆಯರ ಪತ್ರಿಕೆಗಳಿಗೆ ಪ್ರೋತ್ಸಾಹ: ಸಿಎಂ ಬೊಮ್ಮಾಯಿ

ಬೆಂಗಳೂರು: ಮಹಿಳೆಯರ ಪತ್ರಿಕೆಗಳ ಸಬಲೀಕರಣಕ್ಕೆ ಜಾಹೀರಾತು ನೆರವು ನೀಡಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ಅಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ಮಹಿಳಾ ಸಂಪಾದಕಿಯರ ನಿಯೋಗ ಭೇಟಿ ಮಾಡಿದಾಗ ಬೇಡಿಕೆ ಈಡೇರಿಸುವುದಾಗಿ ಹೇಳಿದರು.

ಧೀರ್ಘ ಅವಧಿಯಿಂದ ತಮ್ಮ ಸಂಪಾದಕತ್ವದಲ್ಲಿಯೇ ಪತ್ರಿಕೆ ನಡೆಸಿಕೊಂಡು ಬಂದಿರುವ ಬಗ್ಗೆ ಸಿಎಂ ಗಮನ ಸೆಳೆಯಲಾಯಿತು.

ಕನಿಷ್ಠ ಹತ್ತು ವರ್ಷದಿಂದ ತಮ್ಮ ಸಂಪಾದಕತ್ವದಲ್ಲಿ ನಡೆಯುತ್ತಿರುವ ಪತ್ರಿಕೆಗಳಿಗೆ ಹೆಚ್ಚು ಜಾಹೀರಾತು ಮತ್ತು ಸೌಲಭ್ಯ ನೀಡಬೇಕು ಎಂದು ಮಹಿಳಾ ಸಂಪಾದಕಿಯರು ಸಿಎಂಗೆ ಮನವಿ ಮಾಡಿದರು.

ಮಹಿಳಾ ಸಂಪಾದಕಿಯರ ಸಂಘದ ಅಧ್ಯಕ್ಷೆ ರಶ್ಮಿ ಪಾಟೀಲ್, ಲೀಲಾವತಿ, ರೇಖಾ ಪ್ರಕಾಶ್, ಶಾಂಭವಿ, ಮಂಜುಳಾ, ಅರುಣಾ, ಸುಧಾರಾಣಿ, ಗೀತಾ ಮತ್ತಿತರರು ನಿಯೋಗದಲ್ಲಿದ್ದರು.

 
 
 
 
 
 
 
 
 
 
 

Leave a Reply