ಚಿಟ್ಪಾಡಿ ಶ್ರೀನಿವಾಸ ದೇವಸ್ಥಾನದ ರಥೋತ್ಸವದ ಪ್ರಯುಕ್ತ ವಲಯ ಬ್ರಾಹ್ಮಣ ಸಭಾ ಆಶ್ರಯದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು ಮಾನಸ ,ಚಿ ಚಂದನ್ ಪ್ರಕಾಶ್,ಕು ಶಾರ್ವರಿ ಉಪಾಧ್ಯಾಯ ಹಾಗೂ ಕು ರಾಘವಿ ಭಟ್ ರವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು.ಸಮಾರೋಪ ಸಮಾರಂಭದಲ್ಲಿ ವಲಯ ಬ್ರಾಹ್ಮಣ ಸಭಾ ಗೌರವಾಧ್ಯಕ್ಷ ಡಾ.ಸಿ ಗೋಪಾಲಕೃಷ್ಣ ಬಲ್ಲಾಳ್ ಕಲಾವಿದರನ್ನು ಫಲ- ಪುಷ್ಪ ನೀಡಿ ಗೌರವಿಸಿದರು.ಅಧ್ಯಕ್ಷ ಕೃಷ್ಣ ಭಟ್ ಕಾರ್ಯದರ್ಶಿ ಮಧ್ವರಾಯ ಭಟ್ ಖಜಾಂಜಿ ವೆಂಕಟೇಶ್,ಪದಾಧಿಕಾರಿಗಳಾದ ಫ್ರೋ ವೇಣುಗೋಪಾಲ ಮುಳ್ಳೇರಿಯಾ,ವಿಶ್ವನಾಥ ಬಾಯರಿ,ಸತ್ಯನಾರಾಯಣ,ಪದ್ಮನಾಭ ಮಧ್ಯಸ್ಥ ಮುಂತಾದವರು ಉಪಸ್ಥಿತರಿದ್ದರು..