ಬಂಟಕಲ್ಲು – ಉತ್ಥಾನದ್ವಾದಶಿ – ತುಲಸೀ ವಿವಾಹ ಸಹಿತ ಷೋಡಶೋಪಚಾರ ಪೂಜೆ

ಶಿರ್ವ: ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ಸಾರಸ್ವತ ಮಠಪರಂಪರೆಯ ಆದ್ಯಗುರುಪೀಠ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಮಠ ಕೈವಲ್ಯಪುರ, ಪೋಡಾ, ಗೋವಾ ಇದರ ಪೀಠಾಧಿಪತಿ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀಮಹಾರಾಜ್‌ರ ಮೊಕ್ಕಾಂ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಶ್ರೀಗಳವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಉತ್ಥಾನದ್ವಾದಶೀ ಶುಭಾವರಸರದಲ್ಲಿ ಮಂಗಳವಾರ ರಾತ್ರಿ ತುಲಸೀ ವೃಂದಾವನಕ್ಕೆ ತುಲಸೀ ವಿವಾಹ ಸಹಿತ ಷೋಡಶೋಪಚಾರ ಪೂಜಾ ಧಾರ್ಮಿಕ ಅನುಷ್ಠಾನಗಳು ಸಂಪನ್ನಗೊಂಡವು.

ಶ್ರೀಮಠದ ಹಿರಿಯ ವೈದಿಕ ವೇದಮೂರ್ತಿ ವಿಲಾಸ್ ಭಟ್, ಸಹ ವೈದಿಕ ವೇ.ಮೂ.ಮಹೇಶ್ ಭಟ್, ಮಂಜುನಾಥ್ ಭಟ್, ಬಂಟಕಲ್ಲು ದೇವಳದ ವೈದಿಕ ವೇ.ಮೂ.ಸುಧೀಂದ್ರ ಭಟ್‌ರವರ ಸಹಭಾಗಿತ್ವದಲ್ಲಿ ಪೂಜಾನುಷ್ಠಾನಗಳು ಜರುಗಿದವು.

ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ್ ಪ್ರಭು, ಆಡಳಿತ ಮೊಕ್ತೇಸರ ಶಶಿಧರ್ ವಾಗ್ಲೆ, ಆಡಳಿಯ ಮಂಡಳಿ ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ಆಡಳಿತ ಮಂಡಳಿ ಸದಸ್ಯ ಸುರೇಂದ್ರ ನಾಯಕ್ ಬೆಳ್ಳೆ, ಸುರೇಂದ್ರ ನಾಯಕ್ ಬೆಳಂಜಾಲೆ, ಶ್ರೀಮಠದ ಪ್ರಬಂಧಕ ಗಣೇಶ್ ನಾಯಕ್, ಕೊಡಿಬೆಟ್ಟು ರಾಮಚಂದ್ರ ಕಾಮತ್, ಭಗವದ್ಭಕ್ತರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply