ಭಾರತ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ವತಿಯಿಂದ ಮುಖ್ಯೋಪಾಧ್ಯಾಯರಿಗೆ ಮಾಹಿತಿ ಶಿಬಿರ

ದಿನಾಂಕ 08/07/2022: ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ, ಉಡುಪಿ ಮತ್ತು ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಯವರ ವ್ಯಾಪ್ತಿಯ ಮುಖ್ಯೋಪಾಧ್ಯಾಯರಿಗೆ ಮಾಹಿತಿ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠದ ದಿವಾನ ರಾಗಿರುವ ವರದರಾಜ್ ಬಟ್ ಉದ್ಘಾಟಿಸಿ ಆಶೀರ್ವದಿಸಿದರು.

ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಸ್ಕೌಟ್ ಗೈಡ್ಸ್ ನೋಡಲ್ ಆಫೀಸರ್ ಶ್ರೀ ಚಂದ್ರನಾಯಕ್, ಉಡುಪಿ ವಲಯ ದೈಹಿಕ ಶಿಕ್ಷಣಾಧಿಕಾರಿ ಶ್ರೀ ಗೋಪಾಲ್ ಶೆಟ್ಟಿ , ಬ್ರಹ್ಮರ ವಲಯದ ದೈಹಿಕ ಶಿಕ್ಷಣ ಅಧಿಕಾರಿಯಾಗಿರುವ ಶ್ರೀಮತಿ ಪದ್ಮಾವತಿ, ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಗುರುಮೂರ್ತಿ, ಹಾಗೂ ಮಂಗಳೂರಿನ ತರಬೇತಿ ಆಯುಕ್ತರಾಗಿರುವ ಶ್ರೀ ಪ್ರತಿಮ ಕುಮಾರ್, ಜಿಲ್ಲಾ ಸ್ಕೌಟ್ ಕಮಿಷನರ್ ವಿಜೇಂದ್ರ ವಸಂತರಾವ್, ಜಿಲ್ಲಾ ಗೈಡ್ ಆಯುಕ್ತರಾಗಿರುವ ಜ್ಯೋತಿ ಜೆ. Pai, ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತರಾಗಿರುವ ಆನಂದ ಅಡಿಗ, ಜಿಲ್ಲಾ ಗೈಡ್ ತರಬೇತಿ ಆಯುಕ್ತರಾದ ಶ್ರೀಮತಿ ಸಾವಿತ್ರಿ ಮನೋಹರ್, ಸ್ಥಳೀಯ ಸಂಸ್ಥೆಯಕಾರ್ಯದರ್ಶಿಗಳುಜಿಲ್ಲಾ ಪದಾಧಿಕಾರಿಗಳು, ಉಪಸ್ಥಿತರಿದ್ದು ,ಬ್ರಹ್ಮವಾರ ಮತ್ತು ಉಡುಪಿ ವಲಯದ ಮುಖ್ಯೋಪಾಧ್ಯಾಯರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರಿಯಾದರು. ಈ ಕಾರ್ಯಕ್ರಮವನ್ನು ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಸುಮನ್ ಶೇಖರ್ ಸಂಘಟಿಸಿದರು

 
 
 
 
 
 
 
 
 
 
 

Leave a Reply