“ಭಾರತ ಮತ್ತು ಸಾವರ್ಕರ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ

ಉಡುಪಿ : ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ,ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು,ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿ,ಗೋವು ಭಾರತದ ಏಕತೆಯ ಸಂಕೇತ,ಕನ್ಯಾಕುಮಾರಿಯಿಂದ ಹಿಮಾಲಯದ ತನಕ ಎಲ್ಲರೂ ಗೋವನ್ನು ಪೂಜಿಸುತ್ತಾರೆ.

ಭಾರತದ ಹಿಂದಿನ ಪರಂಪರೆಯ ಬಗ್ಗೆ ಹೊಸ ಪೀಳಿಗೆಗೆ ಸರಿಯಾದ ತಿಳುವಳಿಕೆ ನೀಡಬೇಕಾದ ಹೊಣೆಗಾರಿಕೆ ಇಂದಿನವರಿಗೆ ಇದೆ.ಹಿಂದೂ ದೇಶದ ಅಸ್ಥಿತ್ವದಿಂದಲೇ ಹಿಂದೂ ಧರ್ಮದ ಉಳಿವು ಎಂಬ ಅರಿವು ನಾವು ಹೊರ ಬೇಕಿದೆ ಎಂದು ಅನುಗ್ರಹ ಸಂದೇಶ ನೀಡಿದರು.

ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು,ಸಾವರ್ಕರ್ ಭಾರತದ ಸನಾತನ ಧರ್ಮದ ಬಗ್ಗೆ ಕಾಳಜಿ ಅದ್ದವರು ಯಾರು ಈ ಮಾತೃ ಭೂಮಿಯ ಬಗ್ಗೆ ಚಿಂತಿಸಿದರೋ ಅವರೇ ಈ ನೆಲಕ್ಕೆ ಪರಕೀಯರಂತೆ ಹೊರಗುಳಿಸಿದ್ದು ಖೇದಕರ ಸಂಗತಿ.

ಮಂಗಲಪಾಂಡೆ ಮೊದಲಾದವರು ನಡೆಸಿದ 1857 ರ ಚಳವಳಿಯನ್ನು ದಂಗೆಯಲ್ಲಿ ಅದು ಸ್ವಾತಂತ್ರ್ಯ ಹೋರಾಟ ಎಂದು ಗುರುತಿಸಿದ್ದು ಸಾವರ್ಕರ್ ಅವರು ಮದ್ದುಗುಂಡಿನಲ್ಲಿ ಗೋವಿನ ಕೊಬ್ಬು ಬಳಸುವ ವಿರುದ್ಧ ಬ್ರಿಟಿಷರನ್ನು ಹೊರಗಟ್ಟುವ ಪ್ರಯತ್ನ ಮಾಡಿತು.

ಗೋವು ಈ ನೆಲದ ಜೀವ ಅದನ್ನು ಉಳಿಸಿಕೊಳ್ಳಬೇಕಾದ್ದು ನಮ್ಮೆಲ್ಲರ ಮೊದಲ ಕರ್ತವ್ಯ ಎಂದು ಆದೇಶ ನೀಡಿದರು.ಪುಣೆಯ ಸಾತ್ಯಕಿ ಸಾವರ್ಕರ್ (ವಿ.ದಾ.ಸಾವರ್ಕರ್ ರ ಮೊಮ್ಮಗ) “ಭಾರತ ಮತ್ತು ಸಾವರ್ಕರ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪರ್ಯಾಯ ಮಠದ ಆಸ್ಥಾನ ವಿದ್ವಾಂಸ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು. ವಿಷ್ಣು ಹೆಬ್ಬಾರ್ ಮತ್ತು ಲೀಲಾಕ್ಷ ಕರ್ಕೇರ ಸಭೆಯಲ್ಲಿ ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply