ಬ್ರಹ್ಮಾವರದ ಸೇತುವೆ ಗಾರ್ಡ್ ಗೆ ಲಾರಿ ಡಿಕ್ಕಿ, ತಪ್ಪಿದ ದುರಂತ

ಬ್ರಹ್ಮಾವರ: ಕುಂದಾಪುರದಿಂದ ಬ್ರಹ್ಮಾವರ ಕಡೆ ಸಾಗುತ್ತಿದ್ದ ಲಾರಿ, ಮಾಬುಕಳ ಸೇತುವೆ ಪಕ್ಕದಲ್ಲಿ ರಸ್ತೆಗೆ ಅಳವಡಿಸಿದ ಗಾರ್ಡ್‌ಗೆ ಇಂದು ಡಿಕ್ಕಿ ಹೊಡೆದಿದ್ದು, ಬಹು ದೊಡ್ಡ ಅನಾಹುತವೊಂದು ತಪ್ಪಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದ್ದು, ಈ ಸಂದರ್ಭ ಗಾರ್ಡ್‌ಗೆ ಲಾರಿ ಸಿಕ್ಕಿ ಹಾಕಿಕೊಂಡಿದ್ದರಿಂದ ಆಳಕ್ಕೆ ಬೀಳುವುದು ಅದೃಷ್ಟವಶಾತ್ ತಪ್ಪಿದೆ. ಇಲ್ಲದಿದ್ದರೆ ಚಾಲಕನಿಗೆ ಪ್ರಾಣಾಪಾಯವಿತ್ತು.

 
 
 
 
 
 
 
 
 
 
 

Leave a Reply