ಕೆಲ ವರ್ಷಗಳ ಹಿಂದೆ ಮುಳುಗಿದ್ದ ಹಡಗಿಗೆ ಬೋಟ್ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಬೋಟಿನಲ್ಲಿ ಹತ್ತು ಜನ ಕಾರ್ಮಿಕರಿದ್ದರು. ಅದರಲ್ಲಿ ಒಂಬತ್ತು ಜನರನ್ನು ಇನ್ನೊಂದು ಬೋಟಿನವರು ರಕ್ಷಿಸಿದ್ದಾರೆ. ಒಬ್ಬ ನೀರು ಪಾಲಾಗಿದ್ದಾನೆ. ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ನಾಪತ್ತೆಯಾದ ವ್ಯಕ್ತಿ ತಮಿಳುನಾಡು ಮೂಲದವನು ಎಂದು ತಿಳಿದು ಬಂದಿದೆ. ಆದ್ಯ ಹೆಸರಿನ ಬೋಟಿನಲ್ಲಿ ಈ ದುರಂತ ನಡೆದಿದೆ. ಕೆಲವು ವರ್ಷಗಳ ಹಿಂದೆ ಮುಳುಗಿದ ಹಡಗು ತೆರವುಗೊಳಿಸದ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದನ್ನು ತೆರವು ಗೊಳಿಸದಿದ್ದರೆ ಇನ್ನೂ ಕೂಡ ಅಪಾಯಕಾರಿ ಎನ್ನಲಾಗಿದೆ.