ಉಡುಪಿ ಗ್ರಾಮಾಂತರ ಬಿಜೆಪಿ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

ಉಡುಪಿ ಗ್ರಾಮಾಂತರ ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಭಾರತರತ್ನ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಬ್ರಹ್ಮಾವರದ ಬಿಜೆಪಿ ಕಛೇರಿಯಲ್ಲಿ ಆಚರಿಸಲಾಯಿತು. ಪಕ್ಷದ ಹಿರಿಯಾರದ ಜ್ಞಾನವಸಂತ ಶೆಟ್ಟಿ ಅವರು ಅಂಬೇಡ್ಕರ ಬೆಳೆದು ಬಂದ ರೀತಿ, ಜೀವನ ಚರಿತ್ರೆಯ ವಿಷಯವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮಂಡಲದ ಉಪಾಧ್ಯಕ್ಷರಾದ ರಘುಪತಿ ಬ್ರಹ್ಮಾವರ, ರಾಜ್ಯ ಎಸ್. ಟಿ ಮೋರ್ಚಾದ ಕಾರ್ಯದರ್ಶಿ ಉಮೇಶ್ ನಾಯ್ಕ್ ಚೇರ್ಕಾಡಿ, ಆಕ್ರಮ ಸಕ್ರಮ ಸದಸ್ಯರಾದ ರಾಜು ಪೂಜಾರಿ, ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಕುಲಾಲ್, ಸಚಿನ್ ಪೂಜಾರಿ, ಪಕ್ಷದ ಪ್ರಮುಖರಾದ ಎಸ್ ನಾರಾಯಣ್, ದೇವಾನಂದ, ಶೋಭಾ ಪೂಜಾರಿ, ರಮ್ಯ ಉಪ್ಪೂರು, ಅಶೋಕ್, ನವೀನ್ ಚಂದ್ರ ನಾಯಕ್, ಸದಾನಂದ ಪೂಜಾರಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply