ಆರಿತು ಭುವನ ಜ್ಯೋತಿ ! ಸ್ತಬ್ದವಾಯಿತು ನಾದವೈಭವಮ್.

ಉಡುಪಿಯ ವಾಸುದೇವ ಭಟ್ ಇನ್ನಿಲ್ಲ.   ಖ್ಯಾತ ಸಂಗೀತ ನಿರ್ದೇಶಕರು,  ಉಡುಪಿಯಲ್ಲಿ ನಾದ ವೈಭವಂ ಎಂಬ ಕಲಾ ಸಂಘಟನೆಯನ್ನು ಹುಟ್ಟು ಹಾಕಿ, ಸಂಗೀತ ನತ್ಯ ರೂಪಕ ಹಾಗೂ ಚಲನಚಿತ್ರಗಳನ್ನು, ರಚಿಸಿ ನಿರ್ದೇಶಿಸಿ, ಪಾತ್ರವನ್ನು ಮಾಡಿ ಸೈ ಎನಿಸಿಕೊಂಡವರು . 

ಅನೇಕ ಖ್ಯಾತ ಗಾಯಕರಿಗೆ ಗುರುಗಳಾಗಿ, ಹಾಗೂ ಅನೇಕ ಸಂಗೀತ ಕ್ಷೇತ್ರದ ಶಿಷ್ಯ ವೃಂದನ್ನು ಆಗಲಿದ್ದಾರೆ. 1994 ರಲ್ಲಿ ಸಂಯುಕ್ತ ಕರ್ನಾಟಕಕ್ಕೇ ಉಡುಪಿಯಿಂದ ವರದಿ ಮಾಡುತ್ತಿದ್ದ ಇವರ ಸಾಹಿತ್ಯ ಸೇವೆ ಅಪಾರ.  

 ನಾದ ವೈಭವಂ ವಾಸುದೇವ ಭಟ್ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು  ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಾಹಿತಿಗಳಾದ ಎ ಎಸ್ ಎನ್ ಹೆಬ್ಬಾರ್, ಹರಿಕೃಷ್ಣ ಪುನರೂರು, ಕೂಗೋ, ಶಾಂತಾರಾಜ ಐತಾಳ್,  ​ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವಿಶ್ವನಾಥ್ ಶೆಣೈ ಮೊದಲಾದವರು  ಸಂತಾಪ ವ್ಯಕ್ತಪಡಿಸಿದೆ.  ​ಮಡದಿ ಸುನಂದಾ, ಮಗಳಂದಿರಾದ ವಸುಧಾ, ಶುಭಾ, ಸುಮಾ, ಸ್ಮಿತಾ ,ಅಳಿಯಂದಿರು, ಮೊಮ್ಮಕ್ಕಳು ಹಾಗು ಅಸಂಖ್ಯಾತ ಶಿಷ್ಯವೃಂದವನ್ನು ಅಗಲಿದ್ದಾರೆ.     ​

 
 
 
 
 
 
 
 
 
 
 

Leave a Reply