ಬೆಂಗಳೂರಿನಲ್ಲಿ ಕಾರ್ಪೊರೇಶನ್ ಬ್ಯಾಂಕಿನ ಎ.ಜಿ.ಎಂ. ಆಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ಭಾಸ್ಕರ್ ಆಚಾರ್ಯ(60ವರ್ಷ)ಗುರುವಾರ ನಿಧನ ಹೊಂದಿದರು. ಪ್ರತಿಭಾನ್ವಿತರಾಗಿದ್ದ ಇವರು ನಿಟ್ಟೂರು ಪ್ರೌಢಶಾಲೆ ಮತ್ತು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಹಳೆ ವಿದ್ಯಾರ್ಥಿ ಯಾಗಿದ್ದರು. ಬ್ಯಾಂಕ್ ಉದ್ಯೋಗದ ಪೂರ್ವದಲ್ಲಿ ಅಂಬಲಪಾಡಿಯ ಪ್ರಕಾಶ್ ಟಿಂಬರ್ಸ್ ನಲ್ಲಿ ಉದ್ಯೋಗಿಯಾಗಿದ್ದ ಸರಳ ಸಜ್ಜನಿಕೆಯ ಆಚಾರ್ಯರ ನಿಧನಕ್ಕೆ ಶಾಸಕರಾದ ಕೆ.ರಘುಪತಿ ಭಟ್ ಹಾಗೂ ಮುರಳಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇವರು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಇವರ ಸಹೋದರಿಯ ಪತಿಯಾಗಿದ್ದಾರೆ. ಪತ್ನಿ ಹಾಗೂ ಪುತ್ರ ನನ್ನು ಅಗಲಿದ್ದಾರೆ.