​ಕಾಸ್ಮಿಟಾಲಜಿ ಹಾಗೂ ಬ್ಯೂಟಿಷಿಯನ್ ಕಾರ್ಯಗಾರ

ಉಡುಪಿ: ಸ್ವದೇಶಿ ಸಂಪನ್ಮೂಲ​ಗಳಿಂದ ಶ್ರೇಷ್ಠ ಉತ್ಪನ್ನಗಳನ್ನು ಬಳಸಿ​ ವಿದೇಶಿ ಹಾಗೂ ರಾಸಾಯನಿಕ ಸೌಂದ ರ್ಯವರ್ಧಕಗಳಿಗೆ ಮಾರು ಹೋಗದೆ ಗುಣಮಟ್ಟದ ಸೌಂದರ್ಯ ಬೆಳೆಸುವಕೌಶಲ್ಯವನ್ನು ಮೈಗೂಡಿಸಿ ಉನ್ನತ ಮಟ್ಟದ ವೃತ್ತಿಪರರಾಗಿ ಮೂಡಿ ಬರಬೇಕೆಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ​ ಮಂಗಳೂರು ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ಕರೆ ನೀಡಿದರು.​​

ಅವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಹಾಗೂ ಉಡುಪಿಯ ಡಿ​ ಕ್ಯಾಬೆಲ್ಲೋ ಬ್ಯೂಟಿಪಾರ್ಲರ್ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ೩೦ ದಿನಗಳ ಉಚಿತ ಕಾಸ್ಮಿಟಾಲಜಿ ಹಾಗೂ​  ಬ್ಯೂಟಿಷಿಯನ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಲಾಖೆಯ ಜಂಟಿ ನಿರ್ದೇಶಕ ಅರವಿಂದ ಡಿ ಬಾಳೇರಿ, ಸರಕಾರದ ವತಿ ಯಿಂದ​ ಕೊಡಮಾಡುವ ಉಚಿತ ತರಬೇತಿ ಹಾಗೂ ವಿವಿಧ ಸ್ವಉದ್ಯೋಗ ಯೋಜನೆಗಳ ಕುರಿತು ಮಾಹಿತಿ ನೀಡಿದರು.​ ಜಿಲ್ಲಾ ಕೌಶಲ್ಯಾಧಿಕಾರಿ ಭಾಸ್ಕರ್ ಅಮೀನ್ ಜಿಲ್ಲೆಯ ನಿರುದ್ಯೋಗ ಯುವಕ ಯುವತಿಯರಿಗೆ ಅವರವರ ಆಸಕ್ತಿಗಳಿಗುಣವಾಗಿ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡುವ ಕುರಿತು ತಿಳಿಸಿದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮೇಲ್ವಿಚಾರಕಿ ಚಂದ್ರಿಕಾ ನಾಯಕ್ ಉದ್ಯೋಗಿನಿಯೋಜನೆಯ ಕುರಿತು ವಿವರಿಸಿ, ಧನಸಹಾಯ ಪಡೆಯುವ ಬಗ್ಗೆ ತಿಳಿಸಿದರು.​ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಲಹೆಗಾರ ಜಗನ್ ಡಿ ಕ್ಯಾಬೆಲ್ಲೋ, ರಘು, ಸಿಡಾಕ್ ಉಡುಪಿ​ ಜಿಲ್ಲಾಕೇಂದ್ರದ ವ್ಯವಸ್ಥಾಪಕ ಪೃಥ್ವಿರಾಜ್ ನಾಯಕ್, ಅಭಿಲಾಷ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.​ ಸಿಡಾಕ್‌ನ ಸತೀಶ್ ಮಾಬೆನ್ ಸ್ವಾಗತಿಸಿದರು. ಮಹಿಳಾ ಸಲಹೆಗಾರ್ತಿ ಪ್ರವಿಷ್ಯ ವಂದಿಸಿದರು.​
 
 
 
 
 
 
 
 
 
 
 

Leave a Reply