ಬಾರಿಕರೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

ಕೋಟ: ಬಾರಿಕೆರೆ ಯುವಕ ಮಂಡಲದ ಆಶ್ರಯದಲ್ಲಿ ಬಾರಿಕರೆ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಎ.೧೭ರಂದು ಬಾರಿಕೆರೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಉದ್ಘಾಟಿಸಿ ಮಾತನಾಡಿ ಸಂಘಟನೆಯಲ್ಲಿ ಒಗ್ಗಟ್ಟು ಅತ್ಯಗತ್ಯ ಈ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯದ ಜೊತೆ ಕ್ರೀಡಾಸಕ್ತಿ ಬೆಳೆಸುವ ಯುವಕ ಮಂಡಲಗಳ ಕಾರ್ಯ ಶ್ಲಾಘನೀಯ.ಕ್ರೀಡೆ ಎಂಬುವುದು ಈ ದೇಶದ ಯುವ ಸಮುದಾಯದ ರಕ್ತಗತವಾಗಿ ಬೆಳೆಯುತ್ತಿದೆ ತನ್ಮೂಲಕ ದೇಶ ವಿದೇಶದಲ್ಲಿ ಕ್ರಿಕೆಟ್ ಪ್ರಸಿದ್ಧಿ ಪಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅವಿನಾಶ್ ಮರಕಾಲ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ಸತೀಶ್ ಕುಂದರ್,ಉದ್ಯಮಿ ರವಿ ಬಾರಿಕರೆ, ರತ್ನಾಕರ ಬಾರಿಕರೆ, ಪ್ರದೀಪ ಬಾರಿಕೆರೆ ಉಪಸ್ಥಿತರಿದ್ದರು. ಕಾರ್ಯದರ್ಶಿ ರಂಜಿತ್ ಕುಮಾರ್ ಸ್ವಾಗತಿದರು. ಕಾರ್ಯಕ್ರಮವನ್ನು ಸಂಘದ ಪ್ರಮುಖ ರವಿಕಿರಣ್ ಕೋಟ ನಿರೂಪಿಸಿದರು.ಪ್ರಮೋದ್ ಆಚಾರ್ಯ ವಂದಿಸಿದರು. ಪ೦ದ್ಯದಲ್ಲಿ ಬಾರಿಕೆರೆ ಬ್ರಾಕರ್ಸ್ ಪ್ರಶಸ್ತಿ ಪಡೆದುಕೊಂಡಿತು.

ಬಾರಿಕೆರೆ ಯುವಕ ಮಂಡಲದ ಆಶ್ರಯದಲ್ಲಿ ಬಾರಿಕರೆ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಉದ್ಘಾಟಿಸಿದರು. ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ಸತೀಶ್ ಕುಂದರ್,ಉದ್ಯಮಿ ರವಿ ಬಾರಿಕರೆ,ರತ್ನಾಕರ ಬಾರಿಕರೆ,ಪ್ರದೀಪ ಬಾರಿಕೆರೆ ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply