ಶಿರ್ವ:- ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದ ವಠಾರದಲ್ಲಿ ದೀಪಾವಳಿ ಹಬ್ಬದ ಪರ್ವಕಾಲದಲ್ಲಿ ವರ್ಷಂಪ್ರತಿಯ೦ತೆ ರಾಜಾಪುರ ಸಾರಸ್ವತ ಯುವವೃಂದದ ಆಶ್ರಯದಲ್ಲಿ ಸಾಮೂಹಿಕ ವಾಹನ ಪೂಜೆ, ಗೋಪೂಜೆ ಧಾರ್ಮಿಕ ಅನುಷ್ಠಾನಗಳು ಜರುಗಿದವು.
ಕ್ಷೇತ್ರದ ಅರ್ಚಕ ವೇ.ಮೂ.ಶ್ರೀಕಾಂತ್ ಭಟ್ ಧಾರ್ಮಿಕ ಅನುಷ್ಠಾನಗಳನ್ನು ನೆರವೇರಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂದೇಶ ನೀಡಿದರು. ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಗೋಪೂಜೆಯ ಮಹತ್ವ ತಿಳಿಸಿದರು.
ವೇದಿಕೆಯಲ್ಲಿ ಶಿಕ್ಷಕ ದೇವದಾಸ್ ಪಾಟ್ಕರ್, ನಿವೃತ್ತ ಸೇನಾನಿ ಗೋಪಾಲ ಶೆಟ್ಟಿ ಅರಸೀಕಟ್ಟೆ, ಹಿರಿಯರಾದ ಪುಂಡಲೀಕ ನಾಯಕ್ ಮಾನಿಪಾಡಿ ಹೇರೂರು, ಉದ್ಯಮಿ ಶಿವ ಮೇಸ್ತ್ರೀ, ಯುವವೃಂದ ಕಾರ್ಯದರ್ಶಿ ಸುಮಲತಾ, ಸದಸ್ಯರು ಉಪಸ್ಥಿತರಿದ್ದರು.
ಯುವ ವೃಂದದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಧ್ಯಕ್ಷೆ ಶ್ರಾವ್ಯಾ ಪಾಟ್ಕರ್ ಧನ್ಯವಾದವಿತ್ತರು. ಸಾಮೂಹಿಕ ಪೂಜೆಯಲ್ಲಿ ಸುಮಾರು ನೂರರಷ್ಟು ವಾಹನಗಳು ಇದ್ದವು.