ಬನ್ನಂಜೆ: ಧನಾತ್ಮಕ ಬೆಂಬಲ

ಉಡುಪಿ ಬನ್ನಂಜೆಯ ಶೈಲೇಶ್ ಇವರು ರಕ್ತದ ಕ್ಯಾನ್ಸರ್ ಪೀಡಿತರಾಗಿದ್ದು , ಇವರಿಗೆ ಹೆಚ್ಚಿನ ವ್ಯೆಧ್ಯಕೀಯ ಚಿಕಿತ್ಸೆಗಾಗಿ , ಬನ್ನಂಜೆ ಯ ಲಕ್ಷ್ಮೀ ನಾರಾಯಣ ಚಂಡೆ ವಾದ್ಯ ಬಳಗದ ಸಹಯೋಗ ದೊಂದಿಗೆ ,ವಾಸುದೇವ ಬನ್ನಂಜೆ ಇವರ ನೇತೃತ್ವದಲ್ಲಿ ,ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸುಸಂದರ್ಭದಲ್ಲಿ ಸಹೃದಯವಂತ ದಾನಿಗಳಿಂದ ಪಡೆದ ಹಣವನ್ನು ಕಚ್ಚೂರು ಮಾಲ್ತದೇವಿ ಹಾಗೂ ಬಬ್ಬು ಸ್ವಾಮಿ ಮೂಲ ಕ್ಷೇತ್ರ ಧರ್ಮಶ್ರೀಗಳಾದ ಗೋಕುಲದಾಸ್ ಬಾರಕ್ಕೂರು , ಹಾಗೂ ಕಡಿಯಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಕಿಣಿ ಇವರು ಇಂದು ಶೈಲೇಶ್ ಅವರಿಗೆ ಹಣವನ್ನು ನೀಡಿದರು. 

ಈ ಸಂದರ್ಭದಲ್ಲಿ ಮಾಜಿ ನಗರ ಸಭಾ ಸದಸ್ಯ ಹರೀಶ್ ರಾಂ ಬನ್ನಂಜೆ ಆನಂದ ಶಿರಿಬೀಡು , ಲಕ್ಷ್ಮೀ ನಾರಾಯಣ ಚಂಡೆ ವಾದ್ಯ ಬಳಗದ ತಂಡದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply