ಸೂಪರ್ ಸ್ಪೆಷಾಲಿಟಿ ವಿಭಾಗದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಬಜಗೋಳಿ :- ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ ಕಾಕ೯ಳ , ಕೆ.ಎಂ.ಸಿ ಮಣಿಪಾಲ ಮತ್ತು ಮಂಗಳೂರು ಹಾಗೂ ರೋಟರಿ ಆಸ್ಪತ್ರೆ ಇದರ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಬಜಗೋಳಿ ಸಕಾ೯ರಿ ಶಾಲಾ ವಠಾರದಲ್ಲಿ ಮಾ.27 ರಂದು ಆದಿತ್ಯವಾರ ನಡೆಯಿತು.

ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮೂಡರು ಪಂಚಾಯತ್ ಅಧ್ಯಕ್ಷ ಸುರೇಶ ಶೆಟ್ಟಿ ಈ ರೀತಿಯ ವೈದ್ಯ ತೆಯ ಸೂಪರ್ ಸ್ಪೆಷಾಲಿಟಿ ಶಿಬಿರ ಮೊದಲ ಬಾರಿಗೆ ನಡೆಯುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಇದರಿಂದ ತುಂಬಾ ಪ್ರಯೋಜನವಾಗಿದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕ್ಷೇತ್ರಿಯ ಅಧ್ಯಕ್ಷ ಮಹಾವೀರ ಹೆಗ್ಡೆ, ಉದ್ಯಮಿ ಸದಾಶಿವ ಪೂಜಾರಿ, ಶಾಲಾ ಶಿಕ್ಷಕಿ ಲಿಲ್ಲಿ ಟೀಚರ್ ಕೆ.ಎಂ.ಸಿ ಯ ತಜ್ಞ ವೈದ್ಯರಾದ ಡಾII ಈಶ್ವರ್ ಕೀತಿ೯, ಡಾ|| ಯೋಗಿಶ್ ಕಾಮತ್, ಡಾII ರೊಹಿತ್ ಪೈ, ಡಾII ಶ್ರೀನಾಥ್ ಶೆಟ್ಟಿ, ಡಾII ವಿಧ್ಯಾ ಭಾಟ್, ಡಾ|| ಅನುಷಾ ಶೆಟ್ಟಿ, ಡಾII ಸುಹಾಸ್ ಮುಂತಾದವರು ಉಪಸ್ಥಿತರಿದ್ದರು.ವೈದ್ಯಕೀಯ ಪ್ರಕೋಷ್ಠ ಜಿಲ್ಲಾ ಸಂಚಾಲಕ ಡಾII ರಾಮಚಂದ್ರ ಕಾಮತ್ ಪ್ರಸ್ತಾವನೆಗೈದರು.ಶಿಬಿರದ ಮುಖ್ಯ ಸಂಘಟಕ ವೈದರಾದ ಡಾ|| ರಾಮದಾಸ್ ಹೆಗ್ಡೆ ಸ್ವಾಗತಿಸಿದರು.ರಾಘವೇಂದ್ರ ಕವಾ೯ಲು ನಿರೂಪಿಸಿದರು.ಡಾ” ಗಣೇಶ್ ಕಾಮತ್ ವಂದಿಸಿದರು. ಸುಮಾರು 200 ಜನ ಶಿಬಿರದ ಪ್ರಯೋಜನ ಪಡೆದರು.

 
 
 
 
 
 
 
 
 
 
 

Leave a Reply