ಬ್ರಹ್ಮಾವರ :ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಇದರ ಪುನರ್ ನಿರ್ಮಾಣ ಈ ಕಾರ್ಯಕ್ಕೆ ಪೂರಕವಾಗಿ ಕಬ್ಬನ್ನು ಅರೆಯುವ ಮಹತ್ವಾಕಾಂಕ್ಷೆಯೊಂದಿಗೆ ಶೀಘ್ರದಲ್ಲಿ ಬೆಲ್ಲದ ಆಲೆ ಮನೆ ಪ್ರಾರಂಭಿಸ ಲಾಗುವುದು ಎಂದು ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯಾದ್ಯಂತ ನೂರು ಗ್ರಾಮಗಳನ್ನು ಗುರುತಿಸಿದ್ದು ಒಂದು ಸಾವಿರ ಎಕರೆ ಕಬ್ಬು ಬೆಳೆಯುವ ಗುರಿಯನ್ನು ಹೊಂದಿದ್ದೇವೆ ಕಬ್ಬು ರ ವಿಸ್ತರಣೆಗಾಗಿ ರೈತರನ್ನ ಸಂಪರ್ಕಿಸಲು ನೂರು ಜನ ಯುವಕ ರನ್ನು ಈಗಾಗಲೇ ಗುರುತಿಸಿದ್ದು ಒಬ್ಬೊಬ್ಬರಿಗೆ ಒಂದು ಗ್ರಾಮದ ಜವಾಬ್ದಾರಿಯನ್ನು ನೀಡಿ ರೈತರಲ್ಲಿ ಉತ್ತೇಜನ ನೀಡುವ ಯೋಜನೆ ಕಾರ್ಖಾನೆಗೆ ಇದೆ ಎಂದು ತಿಳಿಸಿದರು .