ಬ್ರಹ್ಮಾವರ ಸಕ್ಕರೆ ಕಾರ್ಖಾನೆ: ಬೆಲ್ಲದ ಆಲೆ ಮನೆ ಶೀಘ್ರದಲ್ಲೇ ಪ್ರಾರಂಭ~ ಬೈಕಾಡಿ ಸುಪ್ರಸಾದ್ ಶೆಟ್ಟಿ 

ಬ್ರಹ್ಮಾವರ :ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಇದರ ಪುನರ್ ನಿರ್ಮಾಣ ಈ ಕಾರ್ಯಕ್ಕೆ ಪೂರಕವಾಗಿ ಕಬ್ಬನ್ನು ಅರೆಯುವ ಮಹತ್ವಾಕಾಂಕ್ಷೆಯೊಂದಿಗೆ ಶೀಘ್ರದಲ್ಲಿ ಬೆಲ್ಲದ ಆಲೆ ಮನೆ ಪ್ರಾರಂಭಿಸ ಲಾಗುವುದು ಎಂದು ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಈಗಾಗಲೇ ರೈತರು ಬೆಳೆದಿರುವ ಕಬ್ಬಿಗೆ ಸೂಕ್ತವಾದ ಬೆಲೆಯನ್ನು ನೀಡಿ ಬೆಲ್ಲದ ಆಲೆ ಮನೆಯ ಮೂಲಕ ಈ ಕಬ್ಬನ್ನು ಅರೆದು ಶುದ್ಧ ಬೆಲ್ಲವನ್ನು ತಯಾರಿಸಿ ಮುಕ್ತ ಮಾರುಕಟ್ಟೆಗೆ ನೀಡಲಾಗುವುದು ಎಂದು ತಿಳಿಸಿದರು. ಈ ಆಲೆಮನೆ  ದಿನಕ್ಕೆ ಹದಿನೈದು ಟನ್ ಕಬ್ಬನ್ನು ಅರೆಯುವ ಸಾಮರ್ಥ್ಯ ಹೊಂದಿದ್ದು ಮುಂದಿನ ಸಾಲಿನಲ್ಲಿ ಉಡುಪಿ ಜಿಲ್ಲೆಯ ರೈತರು ಬೆಳೆಯುವ ಕಬ್ಬಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಖಾನೆಯ ಆವರಣದಲ್ಲಿ ಈ ರೀತಿಯ ಹತ್ತು ಆಲೆಮನೆಗಳನ್ನು ನಿರ್ಮಾಣ ಮಾಡುವ ಬಗ್ಗೆ ಆಡಳಿತ ಮಂಡಳಿ ಚಿಂತನೆ ನಡೆಸಿದ್ದು ಕಬ್ಬು ಬೆಳೆಯುವ ರೈತರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ನಾವು ಮಾಡಲಿದ್ದೇವೆ. 
ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯಾದ್ಯಂತ ನೂರು ಗ್ರಾಮಗಳನ್ನು ಗುರುತಿಸಿದ್ದು ಒಂದು ಸಾವಿರ ಎಕರೆ ಕಬ್ಬು ಬೆಳೆಯುವ ಗುರಿಯನ್ನು ಹೊಂದಿದ್ದೇವೆ ಕಬ್ಬು ರ ವಿಸ್ತರಣೆಗಾಗಿ ರೈತರನ್ನ ಸಂಪರ್ಕಿಸಲು ನೂರು ಜನ ಯುವಕ ರನ್ನು ಈಗಾಗಲೇ ಗುರುತಿಸಿದ್ದು ಒಬ್ಬೊಬ್ಬರಿಗೆ ಒಂದು  ಗ್ರಾಮದ ಜವಾಬ್ದಾರಿಯನ್ನು ನೀಡಿ ರೈತರಲ್ಲಿ ಉತ್ತೇಜನ ನೀಡುವ ಯೋಜನೆ ಕಾರ್ಖಾನೆಗೆ ಇದೆ ಎಂದು ತಿಳಿಸಿದರು .
 
 
 
 
 
 
 
 
 
 
 

Leave a Reply