ಅಯೋದ್ಯೆಯಲ್ಲಿಂದು ಭವ್ಯ ಶ್ರೀ ರಾಮ ಮಂದಿರದ ನಿರ್ಮಾಣದ ಪ್ರಥಮ ಚರಣವಾದ ಭೂಮಿ ಪೂಜೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅಯೋಧ್ಯೆಯಲ್ಲಿ ನೆರೆವೇರಿಸಿದರು. ಇದರ ಸವಿನೆನಪಿಗಾಗಿ ಕೊಡವೂರು ವಾರ್ಡಿನ ಒಂದು ರಸ್ತೆಗೆ ಶ್ರೀ ವಿಜಯ ಕೊಡವೂರು ನೇತ್ರತ್ವದಲ್ಲಿ “ಅಯೋಧ್ಯ” ಎಂದು ಹೆಸರಿಡಲಾಯಿತು.
ಈ ಸಂದರ್ಭದಲ್ಲಿ ಕೊಡವೂರು ವಾರ್ಡ್ ನಗರ ಸಭಾ ಸದಸ್ಯರ ಶ್ರೀ ವಿಜಯ ಕೊಡವೂರು ಹಾಗು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ಪ್ರಭಾತ್ ಕೊಡವೂರು ಹಾಗು ಸ್ಥಳೀಯರು ಉಪಸ್ಥಿತರಿದ್ದರು