750 ಕಿಮೀ ದೂರ ಒಂದೇ ಕಾಲಿನಲ್ಲಿ ಸಾಗಿ ಬಂದ ಅಯ್ಯಪ್ಪನ ಭಕ್ತ

ಕೇರಳ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡಿ, ದೇವರ ದರ್ಶನ ಪಡೆಯುತ್ತಾರೆ.

ಇಲ್ಲಿಗೆ ಭಕ್ತರು ಬಸ್​, ರೈಲು ಹಾಗೂ ಇನ್ನಿತರ ವಾಹನ ಸೌಲಭ್ಯದೊಂದಿಗೆ ಬರುತ್ತಾರೆ. ಆದರೆ, ಇಲ್ಲೊಬ್ಬ ಅಯ್ಯಪ್ಪನ ಪರಮ ಭಕ್ತ, ವಿಶೇಷ ಚೇತನ ವ್ಯಕ್ತಿ ಸುಮಾರು 750 ಕಿಲೋ ಮೀಟರ್​ ನಡೆದುಕೊಂಡೇ ಬಂದು ಭಕ್ತಿಯ ಪರಾಕಾಷ್ಠೆ ಮರೆದಿದ್ದಾರೆ.

ಆಂಧ್ರಪ್ರದೇಶ ನೆಲ್ಲೂರಿನ ಅಕರಪಕ್ಕ ಸುರೇಶ್​ ಎಂಬವರು ತಮ್ಮ ಹುಟ್ಟೂರಿನಿಂದ ಕೇರಳದ ಅಯ್ಯಪ್ಪನ ಸನ್ನಿಧಿಯವರೆಗೆ ಅಂದಾಜು 750 ಕಿಲೋ ಮೀಟರ್​​ ನಡೆದುಕೊಂಡು ಬಂದು ದೇವರ ದರ್ಶನ ಪಡೆದಿದ್ದಾರೆ.

 
 
 
 
 
 
 
 
 
 
 

Leave a Reply