ಆಶಾ ಕಾರ್ಯಕರ್ತೆಯರ ​ಸೇವೆ ಶ್ಲಾಘನೀಯ:ಶ್ರೀಧರ್ ಶೆಟ್ಟಿಗಾರ್

ಮುಲ್ಕಿ: ಕೋರೋನ ಮಹಾಮಾರಿಯ ನಡುವೆಯೂ ಸೋಂಕಿತರನ್ನು ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ನೀಡುವಲ್ಲಿ ಶ್ರಮಿಸುತ್ತಿರುವ ಆಶಾ ಕಾರ್ಯ ಕರ್ತೆಯರ ಕಾರ್ಯ ಶ್ಲಾಘನೀಯ ಎಂದು  ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀಧರ್ ಶೆಟ್ಟಿಗಾರ್ ಹೇಳಿದರು.
ಅವರು ಮುಲ್ಕಿ ವಲಯದಿಂದ ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ಪರಿಸರದ ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರನ್ನು ಗೌರವಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಾಲೇ ಸದಸ್ಯರಿಗೆ ಸತತ ಐದನೇ ಬಾರಿಗೆ ಆಹಾರ ಕಿಟ್ ಹಾಗು ಮಾಸ್ಕ್ ವಿತರಿಸಲಾಯಿತು.   ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಕೆ.  ಭುವನಾಭಿರಾಮ ಉಡುಪರವರನ್ನು ಸನ್ಮಾನಿ ಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ ಕೆ ಪಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಕಟೀಲು ವಿವಿದೋದ್ದೇಶ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಕಟೀಲ್ ಎಕ್ಕಾರ್ ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಟ್ಯಾನಿ ಪಿಂಟೋ, ಮನಪಾ ಜಪ್ಪಿನಮೊಗರು ವಾರ್ಡ್ ಸದಸ್ಯೆ ವೀಣಾ ಮಂಗಳ, ಕಿನ್ನಿಗೋಳಿ ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರಾ, ಎಸ್ ಕೆ ಪಿ ಎ ಜಿಲ್ಲಾ ಕಾರ್ಯದರ್ಶಿ ಹರೀಶ್ ಅಡ್ಯಾರ್, ಮೂಲ್ಕಿ ವಲಯದ ಅಧ್ಯಕ್ಷ ನವೀನ್ ಚಂದ್ರ , ಪದಾಧಿಕಾರಿಗಳಾದ ಮೋಹನ್ ರಾವ್ ಹಳೆಯಂಗಡಿ. ಸುರೇಶ್ ಕೆ.ಬಿ ಕಿನ್ನಿಗೋಳಿ ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು.​
 
 
 
 
 
 
 
 
 
 
 

Leave a Reply