ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ರವರಿಗೆ ಸನ್ಮಾನ 

ಉಡುಪಿ: ವಾಹನ ಚಾಲಕರ ಜಿಲ್ಲಾ ಕೇಂದ್ರ ಸಂಘ (ರಿ), ಸಾರಥಿ ಭವನ, ಉಡುಪಿ ಇದರ ಸಭಾಂಗಣ ನಿರ್ಮಾಣಕ್ಕೆ ಧನ ಸಹಾಯ ನೀಡಿದ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಜನವರಿ 4 ರಂದು ಸಂಘದ ಸ್ಥಾಪಕ ಅಧ್ಯಕ್ಷ ಶಿವರಾಂ ಶೆಟ್ಟಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪಿ. ಸೇಸಪ್ಪ, ಉಪಾಧ್ಯಕ್ಷ ರವೀಂದ್ರ, ಮಾಜಿ ಅಧ್ಯಕ್ಷ ಸೂರ್ಯ ಸೇರಿಗಾರ,
ಸಂಘಟನಾ ಕಾರ್ಯದರ್ಶಿ ಜಬೀವುಲ್ಲಾ ರೆಹಮಾನ್ ಖಾನ್, ಮಚೇಂದ್ರ ಜೋಗಿ, ಜಗದೀಶ, ಹನುಮಂತ, ಗುರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply