ಈಕೆ ಬಾಯಿ ಬಿಟ್ಟರೆ ಇಡೀ ರಾಜ್ಯದ ಸನ್ನಿವೇಶವೇ ಬದಲು!

ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್ ಜನರ ಬಳಿ ಹಣ ಸುಲಿಗೆ ಮಾಡಿದ
ಆರೋಪದ ಮೇಲೆ ಒಡಿಶಾ ಪೊಲೀಸರಿಂದ ಬಂಧನವಾಗಿರುವ ಮಹಿಳಾ ಬ್ಲಾಕ್‌ಮೇಲರ್ ಅರ್ಚನಾ
ನಾಗ್, ನಾನು ಬಾಯಿ ಬಿಟ್ಟರೆ ಒಡಿಶಾದ ಇಡೀ ಸನ್ನಿವೇಶವೇ ಬದಲಾಗಲಿದೆ ಎಂದು ಸ್ಫೋಟಕ
ಹೇಳಿಕೆ ನೀಡಿದ್ದಾಳ.

ಅರ್ಚನಾಳ ಹನಿಟ್ರ್ಯಾಪ್‌ನಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ
ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ಆರೋಪಿಯನ್ನು 7 ದಿನಗಳ ಕಾಲ ಇಡಿ ತನ್ನ ಕಸ್ಟಡಿಗೆ
ತೆಗೆದುಕೊಂಡಿದ್ದು, ಆಕೆಯನ್ನು ವಿಚಾರಣೆಗೆ ಒಳಪಡಿಸುವ ಮುನ್ನ ಝಾರ್ವದ ಜೈಲಿನಿಂದ
ವೈದ್ಯಕೀಯ ತಪಾಸಣೆಗೆಂದು ಕ್ಯಾಪಿಟಲ್ ಹಾಸ್ಪಿಟಲ್‌ಗೆ ಕರೆದೊಯ್ಯಲಾಯಿತು. ಈ ವೇಳೆ
ಮಾಧ್ಯಮದವರೊಂದಿಗೆ ಮಾತನಾಡಿದ ಅರ್ಚನಾ, ಹಲವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ನಾನೇನಾದರೂ ಬಾಯಿ ಬಿಟ್ಟರೆ ಒಡಿಶಾದ ಇಡೀ ಸನ್ನಿವೇಶ ಬದಲಾಗಲಿದೆ.
ಎಲ್ಲವನ್ನು ವಿವರಿಸಲು ನನಗೆ ಸಾಕಷ್ಟು ಕಾಲಾವಕಾಶ ಬೇಕಿದೆ. ಕನಿಷ್ಠ ಪಕ್ಷ ಅರ್ಧ ಗಂಟೆ ಸಮಯ
ಕೂಡಿ, ನಾನು ನಿಮಗೆ ಎಕ್ಸ್‌ಕೂಸಿವ್ ಸಾಕ್ಷಿಯನ್ನು ಕೊಡುತ್ತೇನೆ ಈ ಪ್ರಕರಣದಲ್ಲಿ ನಾನೂ ಕೂಡ
ಬಲೆಗೆ ಸಿಲುಕಿದ್ದೇನೆ. ಆದರೆ, ನಾನು ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾಳೆ.

ಒಡಿಶಾ ಸಿನಿಮಾ ನಿರ್ಮಾಪಕ ಅಕ್ಷಯ ಪಾರಿಜಾ ವಿರುದ್ಧ ಲಕ್ಷ್ಮೀಸಾಗರ ಪೊಲೀಸ್ ಠಾಣೆಯಲ್ಲಿ
ದೂರು ನೀಡಿದ ದಿನದಿಂದಲೂ ತನ್ನ ಸಹವರ್ತಿ ಶ್ರದ್ಧಾಂಜಲಿ ಬೆಹರಾ ಕರೆ ದಾಖಲೆಗಳನ್ನು ಇಡಿ
ಪರಿಶೀಲಿಸಬೇಕು ಎಂದು ಅರ್ಚನಾ ಆಗ್ರಹಿಸಿದ್ದಾರೆ. ಅಲ್ಲದೆ, ಈ ಪುಕರಣದ ಬಗ್ಗೆ ಸರಿಯಾದ
ತನಿಖೆಗಾಗಿ ಕಾಯುತ್ತಿದ್ದೇನೆ ಮತ್ತು ಪುಕರಣ ತನ್ನ ಪರವಾಗಿ ಪ್ರಸ್ತುತಪಡಿಸಲು ಇನ್ನೂ ಅವಕಾಶವಿದೆ.
ಎಂದು ಮಾಧ್ಯಮಗಳಿಗೆ ಅರ್ಚನಾ ತಿಳಿಸಿದರು.

ಇಡಿ ಅಧಿಕಾರಿಗಳ ತನಿಖೆಗಾಗಿ ಸಹಕರಿಸಲು ನಾನು ಸಂಪೂರ್ಣವಾಗಿ ತಯಾರಾಗಿದ್ದೇನೆ. ನಾನು ಈ
ದಿನಕ್ಕಾಗಿ ಕಾಯುತ್ತಿದ್ದೆ. ನಾನು ಯಾರನ್ನೂ ಬಿಡುವುದಿಲ್ಲ ಎಂದಿರುವ ಅರ್ಚನಾ, ನಾನು
ಪಕರಣದಲ್ಲಿ ಸಿಕ್ಕಿಬಿದ್ದಿರುವಾಗ ಇಬ್ಬರು ವ್ಯಕ್ತಿಗಳು ಅದರ ಲಾಭ ಪಡೆದಿದ್ದಾರೆ ಎಂದು
ಆರೋಪಿಸಿದ್ದಾರೆ. ಆದರೆ, ಅವರು ಯಾರು ಎಂಬುದನ್ನು ಆಕೆ ತಿಳಿಸಲಿಲ್ಲ.

ಯಾರು ಈ ಅರ್ಚನಾ?
26 ವರ್ಷದ ಅರ್ಚನಾ ಓರ್ವ ಬ್ಲಾಕ್‌ಮೇಲರ್, ಈಕೆಯ ಹನಿಟ್ರ್ಯಾಪ್ ಬಲೆಗೆ ಬಿದ್ದ ರಾಜಕಾರಣಿಗಳು,
ಉದ್ಯಮಿಗಳು ಮತ್ತು ಸಿನಿಮಾ ನಿರ್ಮಾಪಕರು ಸೇರಿದಂತೆ ಪ್ರಭಾವಿಗಳ ಅಶ್ಲೀಲ ಫೋಟೋ ಮತ್ತು
ವಿಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿ ಬೆದರಿಸಿ, ಹಣ ಸುಲಿಗೆ
ಮಾಡುವುದೇ ಈಕೆಯ ನಿತ್ಯದ ಕೆಲಸವಾಗಿತ್ತು. ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್
ವಾರಿಜಾ ಅವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ
ಪೊಲೀಸರ ಅತಿಥಿಯಾಗಿದ್ದು, ಆಕೆಯ ಎಲ್ಲ ಪುರಾಣಗಳು ಇದೀಗ ಬಯಲಾಗುತ್ತಿದೆ.
ಅಂದಹಾಗೆ ಅರ್ಚನಾ ನಾಗ್, 18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್
ಬಲೆಗೆ ಕಡೆವಿರುವುದಾಗಿ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ
ತಲ್ಲಣ ಉಂಟು ಮಾಡಿದೆ. ಹನಿಟ್ರ್ಯಾನ್‌ಗೆ ಒಳಗಾದ ಶಾಸಕರಲ್ಲಿ ಬಹುತೇಕರು ಮುಖ್ಯಮಂತ್ರಿ
ನವೀನ್ ಪಟ್ನಾಯಕ್ ನೇತೃತ್ವದ ಬಿಜೆಪಿ ಸರ್ಕಾರದ ಸದಸ್ಯರಾಗಿದ್ದಾರೆ. 2018 ರಿಂದ 2022 ರವರೆಗಿನ
ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಅರ್ಚನಾ ಮತ್ತು ಆಕೆಯ ಪತಿ ಜಗಬಂಧು 30 ಕೋಟಿ
ರೂಪಾಯಿ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ. ಅರ್ಚನಾ ಹೆಸರಿನಲ್ಲಿ ಮೂರು ಅಂತಸ್ತಿನ
ಅರಮನೆಯಂತಹ ಬಂಗಲೆ ಇದೆ. ಮನೆಯಲ್ಲಿ ಪೀಠೋಪಕರಣಗಳ ಬೆಲೆ 40 ಲಕ್ಷ ರೂ. ಎಂಬುದು
ಅಚ್ಚರಿಯ ಸಂಗತಿ

 
 
 
 
 
 
 
 
 
 
 

Leave a Reply