ಉಡುಪಿಯ ಅಜ್ಜರಕಾಡು ಪಾರ್ಕ್‌ನಲ್ಲಿ ಮಣ್ಣನ್ನು ಉಳಿಸಿ ಅಭಿಯಾನ

ಮಣ್ಣನ್ನು ಉಳಿಸಿ ಅಭಿಯಾನವು ಕರ್ನಾಟಕದಲ್ಲಿ 12ನೇ Apr 2022 ರಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಪ್ರಾರಂಭವಾಯಿತು.

ಅಂದಿನಿಂದ ಸಾಕಷ್ಟು ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ವಿಶ್ವ ಭೂಮಿ ದಿನ 22 ಏಪ್ರಿಲ್ 2022 ರಂದು ಉಡುಪಿಯ ಅಜ್ಜರಕಾಡು ಪಾರ್ಕ್‌ನಲ್ಲಿ ಬರಿಗಾಲಿನಲ್ಲಿ ನಡೆಯುವ ಮೂಲಕ ಪ್ರತಿಯೊಬ್ಬರೂ ಮಣ್ಣನ್ನು ಸ್ಪರ್ಶಿಸುವ ಅನುಭವವನ್ನು ಪಡೆದರು ಮತ್ತು ಮಣ್ಣಿನಿಂದ ಮೂರ್ತಿ ಮಾಡುವ ಸ್ಪರ್ಧೆಗಳು ನಡೆದವು.ವಿಶ್ವ ಭೂಮಿ ದಿನದಂದು ಭಾಗವಹಿಸಿದ ಪ್ರತಿಯೊಬ್ಬರ ಮಣ್ಣಿನ ಕೈಮುದ್ರೆಗಳನ್ನು ಬಿಳಿ ಬಟ್ಟೆಯಲ್ಲಿ ತೆಗೆದುಕೊಳ್ಳಲಾಗಿದೆ ಮತ್ತು ಅದನ್ನು ಶೀಘ್ರದಲ್ಲೇ ಸದ್ಗುರುಗಳೊಂದಿಗೆ ಹಂಚಿಕೊಳ್ಳಲಾಗುವುದು.

23ನೇ ಏಪ್ರಿಲ್ 22 ರಂದು ಮಣಿಪಾಲದ ಶಾರದ ಸ್ಟೇಡಿಯಂನಲ್ಲಿ ಮಣಿಪಾಲ ಕ್ರಿಕೆಟ್ ಕ್ಲಬ್ ಆಯೋಜಿಸಿದ ಕಾರ್ಯ್ರಮವೊಂದರಲ್ಲಿ ಮಣ್ಣು ಉಳಿಸಿ ಸ್ಕಿಟ್ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾದ ಇನ್ನೊಂದು ಕಾರ್ಯಕ್ರಮವಾಗಿದೆ. ಉಡುಪಿ ಮಣ್ಣಿನ ಉಳಿಸಿ ಬಳಗದ ಸ್ವಯಂಸೇವಕರು ಕಿರುನಾಟಕ ಪ್ರದರ್ಶಿಸಿ ಈ ಅಭಿಯಾನದ ಮಹತ್ವದ ಕುರಿತು ತಿಳಿಸಿದರು. ಈ ಕಾರ್ಯಕ್ರಮವನ್ನು ಯುವಕರು ಮತ್ತು ಹಿರಿಯರು ತುಂಬಾ ಮೆಚ್ಚಿದರು. ಈ ಆಂದೋಲನದ ಬಗ್ಗೆ ಜಾಗೃತಿ ಮೂಡಿಸಲು ಉಡುಪಿಯ ಮಣ್ಣು ಉಳಿಸಿ ಬಳಗದ ಸ್ವಯಂಸೇವಕರು ಸಕ್ರಿಯವಾಗಿ ಕಾರ್ಯಕ್ರಮಗಳನ್ನು ಹಲವಾರು ಶಾಲಾ ಕಾಲೇಜು ಮತ್ತು ಸಂಘಸಂಸ್ಥೆಗಳಲ್ಲಿ ನಡೆಸಲಾರಂಭಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಇಂತಹ ತುಂಬಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ.

 
 
 
 
 
 
 
 
 
 
 

Leave a Reply