ಪಿ ಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಸಂಬಂಧಿಸಿದಂತೆ ಸಿಐಡಿ ಎಡಿಜಿಪಿ ಅಮೃತ್ ಪಾಲ್ ಅವರನ್ನು ಬಂಧಿಸಿದ್ದಾರೆ. ಈ ಮೂಲಕ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿ ಬಂಧನವಾಗಿದೆ.
ಪಿಎಸ್ಐ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 4ನೇ ದಿನದ ವಿಚಾರಣೆಗೆ ಹಾಜರಾಗಿದ್ದ ಎಡಿಜಿಪಿ ಅಮೃತ್ ಪಾಲ್ ಅವರನ್ನು ಸಿಐಡಿ ಪೊಲೀಸರು ಬಂದಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಪಿಎಸ್ಐ ಅಕ್ರಮ ಕೇಸಲ್ಲಿ ಎಡಿಜಿಪಿ ಅರೆಸ್ಟ್ ಮಾಡಿದ್ದಾರೆ. ಸಾಕ್ಷ್ಯಾಧಾರ ಸಿಕ್ಕದ್ದರಿಂದ ಪಾಲ್ ಬಂಧಿಸಲಾಗಿದೆ. ಯಾಕಂದ್ರೆ, ಅಲ್ಲಿ ಅವ್ರು ನೇಮಕಾತಿ ವಿಭಾಗದ ಸುಪ್ರೀಂ ಆಗಿರುತ್ತಾರೆ.
ಅವ್ರಿಗೆ ಗೊತ್ತಿಲ್ಲದೇ ಈ ಅಕ್ರಮ ನಡೆಯಲು ಸಾಧ್ಯವಿಲ್ಲ. ಅವರ ಆಫೀಸಲ್ಲೇ ಒಎಂಆರ್ ಶೀಟ್ ತಿದ್ದುಪ ಡಿ ಕೆಲಸವಾಗಿದೆ ಎನ್ನಲಾಗ್ತಿದೆ’ ಎಂದರು.