ಆಸರೆ ಚಾರಿಟೇಬಲ್ ಟ್ರಸ್ಟ್ (ರಿ.) ಕಡಿಯಾಳಿ ಉಡುಪಿ ಇದರ ವತಿಯಿಂದ ಮಟ್ಟಾರು ಆನಂದ ಕಿಣಿ ಜನ್ಮಶತಾಬ್ಧಿಯ ಸ್ಮರಣಾರ್ಥ ಸುಬ್ರಹ್ಮಣ್ಯನಗರ ವಾರ್ಡಿನ ದಲಿತಸಮುದಾಯದ ಶ್ರೀಮತಿ ಸುಮತಿ , ಮತ್ತು ಶ್ರೀಮತಿ ಲಲಿತಾ ಎಂಬುವವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸ ಲಾಗಿದ್ದು ದಿನಾಂಕ 27-02-2021 ರಂದು ಮಟ್ಟಾರು ರಮೇಶ್ ಕಿಣಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ.ವಸಂತ ಭಟ್, ಉಡುಪಿ ಗಣೇಶೋತ್ಸವ ಸಮಿತಿಯ ಸಂಚಾಲಕರು ಮತ್ತು ದಾನಿಗಳಾದ ಮಟ್ಟಾರು ಗಣೇಶ್ ಕಿಣಿ , ಮಟ್ಟಾರು ಸತೀಶ್ ಕಿಣಿ, ಮಟ್ಟಾರು ಶ್ರೀನಿವಾಸ್ ಕಿಣಿ ,ಮಟ್ಟಾರು ವಸಂತ ಕಿಣಿ,ಸ್ಥಳೀಯ ನಗರಸಭಾ ಸದಸ್ಯರಾದ ಜಯಂತಿ, ನಗರ ಸಭೆಯ ನಾಮ ನಿರ್ದೇಶಿತ ಸದಸ್ಯರಾದ ಸುಬೇದ, ಉಪಸ್ಥಿತರಿದ್ದರು.ಆಸರೆ ಚಾರಿಟೇಬಲ್ ಟ್ರಸ್ಟ್ ಇದರ ಕೋಶಧಿಕಾರಿ ಕೆ ಸತೀಶ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.
ಕಡಿಯಾಳಿ ಶ್ರಿಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಮಂಜುನಾಥ ಹೆಬ್ಬಾರ್ ಸ್ವಾಗತಿಸಿ ಕಡಿಯಾಳಿ ಗಣೇಶೋತ್ಸವ ಸಮಿತಿಯ ಸದಸ್ಯರಾದ ರಾಕೇಶ್ ಜೋಗಿ ವಂದಿಸಿದರು. ಈ ಸಂದರ್ಭದಲ್ಲಿಸ್ಥಳೀಯರಾದ ಯತೀಶ್ ಶೆಣೈ, ಅನಂತಮೂರ್ತಿ ಭಟ್ ಸತೀಶ್ ಪೂಜಾರಿ, ಜಯಂತ್ ಪೂಜಾರಿ, ಲಕ್ಷ್ಮಿ, ಮತ್ತು ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಮನೆಯ ವಿದ್ಯುಚ್ಛಕ್ತಿ ಸಂಪರ್ಕ ನಿರ್ವಹಣೆಯನ್ನು ಅಶ್ವತ್ಥ್ ದೇವಾಡಿಗ ಮಹಿಷಮರ್ದಿನಿ ಎಲೆಕ್ಟ್ರಿ ಕಲ್ಸ್ ಕಡಿಯಾಳಿ ಇವರು ನಿರ್ವಹಿಸಿ ಈ ಎರಡು ಮನೆಗಳು ಸೇರಿ ಉಡುಪಿ ನಗರದ 71 ಮನೆ ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಮಾಡಲಾಗಿದೆ ರೆ