ಆಚಾರ್ಯಾಸ್ ಏಸ್: ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಉಡುಗೊರೆ

ಒಂಬತ್ತು,ಹತ್ತು,ಪಿಯುಸಿ, ಸಿಯಿಟಿ,ಜೆಯಿಯಿ,ನೀಟ್,ಬ್ಯಾಂಕಿಂಗ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ಆಯೋಜಿಸಿ ಉತ್ಕೃಷ್ಟ ಫಲಿತಾಂಶ ಗಳಿಸುತ್ತಿರುವ ಆಚಾರ್ಯಾಸ್ ಏಸ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆಯನ್ನು ನೀಡಲಾಯಿತು.

ಉಡುಪಿಯ ಆಚಾರ್ಯಾಸ್ ಏಸನಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಸೆಂಟ್ರಲ್ ಬ್ಯಾಂಕಿನ ನಿವೃತ್ತ ಪ್ರಬಂಧಕ ಸೊಂಡೂರು ಪ್ರಹ್ಲಾದ ಆಚಾರ್ಯರು ಉಪಸ್ಥಿತರಿದ್ದರು.ಏಸ್ ಸಂಸ್ಥೆಯ ಹತ್ತನೇ ತರಗತಿಯ ಸಿ.ಬಿ.ಎಸ.ಯಿ,ಸ್ಟೇಟ್,ಐಸಿ.ಎಸ.ಯಿ ನ 60 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಮಾಡಿದ ಉಡುಗೊರೆಯನ್ನು ಪ್ರಹ್ಲಾದ ಆಚಾರ್ಯರು ವಿದ್ಯಾರ್ಥಿಗಳಿಗೆ ಪ್ರದಾನಿಸಿ ಶುಭ ಹಾರೈಸಿದರು.
ಈ ಶುಭ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಆಡಳಿತ ನಿರ್ದೇಶಕರಾದ ಅಕ್ಷೋಭ್ಯ ಆಚಾರ್ಯರು,
ಈ ಭಾರಿಯ ಹತ್ತನೆಯ ತರಗತಿಯಲ್ಲಿ ಗರಿಷ್ಠ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ವಿಶೇಷ ನಗದು ಹಾಗೂ ಪಾರಿತೋಶಕವು ಸಂಸ್ಥೆಯ ವತಿಯಿಂದ ಲಭಿಸಲಿರುವ ವಿಚಾರ ಪ್ರಸ್ತಾಪಿಸಿದರು. ಪಿ.ಲಾತವ್ಯ ಆಚಾರ್ಯ, ಪ್ರೀತಿ.ಎಲ್.ಆಚಾರ್ಯ ಉಪಸ್ಥಿತರಿದ್ದರು.

ಒಂಬತ್ತು,ಹತ್ತನೇ ತರಗತಿ, ಪಿಯುಸಿಯ ದೈನಂದಿನ ತರಗತಿಗಳು ಹಾಗೂ ಸಿಯಿಟಿ,ಜೆಯಿಯಿ,ನೀಟ್ ನ ವಾರಾಂತ್ಯದ ತರಗತಿಗಳು ಆರಂಭವಾಗಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಉಡುಪಿ ತೆಂಕಪೇಟೆ ಶ್ರೀಲಕ್ಷ್ಮೀವೆಂಕಟರಮಣ ದೇವಾಲಯದ ಮುಂಭಾಗದ ರಾಧೇಶ್ಯಾಮ ಕಟ್ಟಡದ ಏಸ್ ಕಚೇರಿ ಅಥವಾ ಬ್ರಹ್ಮಾವರ ಮಧುವನ ಕಾಂಪ್ಲೆಕ್ಸನಲ್ಲಿರುವ ಏಸ್ ಕಚೇರಿಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply