ನಮ್ಮಪರಮಪ್ರಿಯರೂ , ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳೂ , ನಾಡಿನ ಧಾರ್ಮಿಕ- ಸಾಂಸ್ಕೃತಿಕ-ಶೈಕ್ಷಣಿಕ- ಸಾಮಾಜಿಕ ರಾಯಭಾರಿಗಳೂ ಆಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮಾಡುವ ಸಪ್ರೇಮ ನಾರಾಯಣ ಸ್ಮರಣೆಗಳು. ಇಂದು ತಮ್ಮ 73 ನೇ ಜನ್ಮವರ್ಧಂತಿಯೆಂದು ತಿಳಿದು ಅತೀವ ಸಂತಸವಾಯಿತು.
ಉಡುಪಿಯ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ತಮಗೆ ದೀರ್ಘಾಯುಷ್ಯ ಆರೋಗ್ಯ ನೆಮ್ಮದಿಯುಕ್ತ ಜೀವನವನ್ನು ಕರುಣಿಸಲಿ ; ತಮ್ಮಿಂದ ನಾಡಿಗೆ , ದೇಶಕ್ಕೆ ಬಹುಕಾಲ ಉತ್ತಮ ಮಾರ್ಗದರ್ಶನ ಹಾಗೂ ಸೇವೆಯು ದೊರೆಯುವಂತಾಗಲಿ ಎಂದು ಪ್ರಾರ್ಥಿಸಿ ಹಾರ್ದಿಕ ಶುಭವನ್ನು ಕೋರುತ್ತೇವೆ.