ವಿವಾಹಿತ ನೇಣಿಗೆ ಶರಣು

ಕುಂದಾಪುರ : ಇತ್ತೀಚೆಗಷ್ಟೇ ಹಟ್ಟಿಯಂಗಡಿಯಲ್ಲಿ ಆರಂಭಿಸಿದ್ದ ಸ್ಥಳೀಯರೋರ್ವರ ಮೀನಿನಂಗಡಿ ಮಾಡಿನ ಕಬ್ಬಿಣದ ಪೈಪಿಗೆ ನೇಣು ಬಿಗಿದು ವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಮೂಲತಃ ಸಾಗರದವನಾದ, ಪ್ರಸ್ತುತ ದೇವಲ್ಕುಂದ ತಟ್ಟೆಗೋಡ್ಲು ಎಂಬಲ್ಲಿ ಹೆಂಡತಿ ಮನೆಯಲ್ಲಿ ವಾಸವಿದ್ದ ಸುಬ್ರಹ್ಮಣ್ಯ ಪೂಜಾರಿ (36 ವ.) ಆತ್ಮಹತ್ಯೆಗೆ ಮಾಡಿಕೊಂಡವರು.
ದೇವಲ್ಕುಂದದ ಯುವತಿಯನ್ನು ವಿವಾಹವಾದ ಬಳಿಕ ಇಲ್ಲಿಯೇ ಇದ್ದು ಮೊದಲಿಗೆ ಡ್ರೈವಿಂಗ್, ಬಳಿಕ ಇಲೆಕ್ಟ್ರೀಶಿಯನ್ ಜೊತೆಗೆ ಕೂಲಿ ಕೆಲಸ ಮಾಡಿಕೊಂಡಿದ್ದು ವಿಪರೀತ ಕುಡಿತದ ಚಟವುಳ್ಳವರಾಗಿದ್ದರು ಎನ್ನಲಾಗಿದೆ. ಮನೆಯಲ್ಲೂ ಆಗಾಗ ಜಗಳವಾಡುತ್ತಿದ್ದರು ಎನ್ಮಲಾಗಿದೆ‌.

ಕಳೆದ ರಾತ್ರಿ ಹಟ್ಟಿಯಂಗಡಿ ಸಮೀಪದ ಮೀನಿನಂಗಡಿಗೆ ಆಗಮಿಸಿದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಕೊರಳೊಡ್ಡಿರಬಹುದು ಎನ್ನಲಾಗಿದೆ. ಅವರಿಗೆ ಪತ್ನಿ ಹಾಗೂ ಎಂಟು ವರ್ಷದ ಮಗ ಇದ್ದಾರೆ. ಕುಂದಾಪುರ ಗ್ರಾಮೀಣ ಠಾಣೆಯಲ್ಲಿ ಕೇಸು ದಾಖಲಿದೆ.

 
 
 
 
 
 
 
 
 
 
 

Leave a Reply