ಗುಂಡಿಬೈಲು ನಿವಾಸಿ ಎಚ್. ಪುಂಡಲೀಕ ಭಟ್(76) ಬುಧವಾರ ಬೆಳಿಗ್ಗೆ ನಿಧನ

ಉಡುಪಿ: ಉಡುಪಿಯ ಪ್ರಖ್ಯಾತ ಪಾಕ ತಜ್ಞ, ಕ್ಯಾಟರಿಂಗ್ ಉದ್ಯಮಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ ಗುಂಡಿಬೈಲು ನಿವಾಸಿ ಎಚ್. ಪುಂಡಲೀಕ ಭಟ್(76) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಅವರು ಕಳೆದ 5 ದಶಕಗಳಿಂದ “ಭಟ್ಜೀಸ್” ಎಂಬ ಕ್ಯಾಟರಿಂಗ್ ಸಂಸ್ಥೆಯ ಪ್ರಾರಂಭಿಸಿದ್ದರು. ಕೊಡುಗೈ ದಾನಿಯಾಗಿದ್ದ ಅವರು ಹಲವಾರು ಬಡವರಿಗೆ ಉಚಿತವಾಗಿ ಅನ್ನದಾನದ ವ್ಯವಸ್ಥೆ ಮಾಡುತ್ತಿದ್ದರು.

ಮೃತರು ಪತ್ನಿ, 2 ಮಂದಿ ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.  ಪುಂಡಲೀಕ ಭಟ್ ನಿಧನಕ್ಕೆ ಉಡುಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಸಂತಾಪ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 

Leave a Reply