ಗಣೇಶೋತ್ಸವ ಆಚರಣೆ, ವಿಸರ್ಜನೆಗೆ ಅನುಮತಿ ನೀಡಿ: ಮಧುಕರ ಮುದ್ರಾಡಿ

ಉಡುಪಿ: ಕೋವಿಡ್-19 ಕಾರಣಕ್ಕಾಗಿ ಜಿಲ್ಲಾಧಿಕಾರಿಗಳು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹೇರಿದ್ದು, ಇದು ಹಿಂದುಗಳ ಭಾವನೆಗಳಿಗೆ ನೋವುಂಟುಮಾಡಿದೆ. ರಾಜ್ಯದಲ್ಲಿ ಬೇರೆ ಎಲ್ಲಾ ಕಾರ್ಯಕ್ರಮಗಳು ಸರಳವಾಗಿ ನಡೆಯುತ್ತಿದ್ದರೂ ಗಣೇಶೋತ್ಸವಕ್ಕೆ ಮಾತ್ರ ನಿರ್ಬಂಧ ಸರಿಯಲ್ಲ.

ಹಿಂದುತ್ವ , ಶ್ರೀ ರಾಮನ ಹೆಸರಿನಲ್ಲಿ ಅಧಿಕಾರದಲ್ಲಿರುವ ಸರಕಾರ ಇಂತಹ ನಿರ್ಧಾರಗಳಿಂದ ದೂರ ಸರಿದು ಹಿಂದೂಗಳ ಐಕ್ಯತೆ , ಒಗ್ಗಟ್ಟು , ಭಾವನೆಗಳಿಗೆ ಬೆಲೆಕೊಟ್ಟು ಕೂಡಲೇ ಸಾರ್ವಜನಿಕವಾಗಿ ಸರಳವಾಗಿ ಧಾರ್ಮಿಕ ವಿಧಿವಿಧಾನ ಹಾಗು ವಿಸರ್ಜನೆಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಆಚರಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಶಿವಸೇನಾ ಪಕ್ಷದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುಕರ ಮುದ್ರಾಡಿ ರಾಜ್ಯದ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

 
 
 
 
 
 
 
 
 

Leave a Reply