ಕೃಷಿಪಾಠ ಕಲಿಸಿದ ಕೊರೊನಾ

 

 

 

 

ಕೃಷಿಪಾಠ ಕಲಿಸಿದ ಕೊರೊನಾ

ಕುಂದಾಪುರ: ವಿಶ್ವವನ್ನೇ ತಲ್ಲಣಗೊಳಿಸಿ ಕೊರೊನಾ ಅನೇಕರಿಗೆ ಕೃಷಿಪಾಠ ಕಲಿಸಿದ್ದಂತೂ ಸುಳ್ಳಲ್ಲ. ಅದಕ್ಕೊಂದು ನಿದರ್ಶನ ಬೇಳೂರು ಗ್ರಾಮ. ಬೇಳೂರು ನಿವಾಸಿ ಶಶಿಧರ ಎಂಬ 22ರ ಹರೆಯದ ಯುವಕ ಐ.ಟಿ.ಐ ಪೂರೈಸಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು.

ಕೊರೊನಾದಿಂದಾಗಿ ಊರಿಗೆ ಮರಳುವುದು ಅನಿವಾರ್ಯವಾಯಿತು‌. ಈ ಸಂದರ್ಭದಲ್ಲೂ ಧೃತಿಗೆಡದ ಆತ , ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ಗದ್ದೆಯಲ್ಲಿ ಉಳುಮೆ ಮಾಡಲು ತೊಡಗಿದ. ಕೃಷಿಯಲ್ಲಿ ತೊಡಗಿಕೊಂಡ ಈತನ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬುದನ್ನು ಶಶಿಧರ ಕಂಡುಕೊಂಡಿದ್ದಾರೆ.

(ಚಿತ್ರ: ನಾಗಭೂಷಣ ಬೇಳೂರು)

 
 
 
 
 
 
 
 
 
 
 

Leave a Reply