ಕುಂದಾಪುರ ಯುವಮೋರ್ಚ “ಯುವ ಹಸಿರು” ಸಮಾರೋಪ

ಬಿಜೆಪಿ ಯುವಮೋರ್ಚಾ ಕುಂದಾಪುರ ದ “ಯುವ ಹಸಿರು” ಕಾರ್ಯಕ್ರಮದ ಸಮಾರೋಪ ಸಮಾರಂಭ ಕುಂದಾಪುರ ನಗರದ ನಾರಾಯಣ ಗುರು ಸಭಾಭವನ ದಲ್ಲಿ ಜರುಗಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಕ್ಷೇತ್ರಾ ಧ್ಯಕ್ಷರಾದ ಶಂಕರ ಅಂಕದಕಟ್ಟೆ, ಹಿರಿಯ ಮುಖಂಡ ಪುರಸಭೆ ಸದಸ್ಯ ಮೋಹನ ದಾಸ ಶೆಣೈ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಸತೀಶ ಪೂಜಾರಿ ವಕ್ವಾಡಿ ಹಾಗೂ ಸುರೇಶ್ ಶೆಟ್ಟಿ ಗೋಪಾಡಿ, ಜಿಲ್ಲಾ ಕಾರ್ಯದರ್ಶಿ ಗಳಾದ ಸದಾನಂದ ಬಳ್ಕೂರು ಹಾಗೂ ಗುಣರತ್ನ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ಕುಂದಾಪುರ ಯುವಮೋರ್ಚಾ ಅಧ್ಯಕ್ಷ ಅವಿನಾಶ ಉಳ್ತೂರು, ಕುಂದಾಪುರ ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸುಕೇಶ್ ಭಂಡಾರ್ಕರ್ ಉಪಸ್ಥಿತರಿದ್ದರು.


ಬಿಜೆಪಿ ಕುಂದಾಪುರದ ಮಂಡಲದ ಪಧಾಧಿಕಾರಿಗಳು, ಯುವಮೋರ್ಚಾ ಮಂಡಲ ಪಧಾಧಿಕಾರಿಗಳು ಹಾಗೂ ಎಲ್ಲಾ ಮೋರ್ಚಾಗಳ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳು, ಬಿಜೆಪಿ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯ ದರ್ಶಿಗಳು, ಯುವಮೋರ್ಚಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪುರಸಭಾ ಸದಸ್ಯರು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸದಸ್ಯರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಚೇತನ್ ಬಂಗೇರ ಅಥಿತಿಗಳನ್ನು ಸ್ವಾಗತಿಸಿ ಸುನಿಲ್ ಖಾರ್ವಿ ಧನ್ಯವಾದ ತಿಳಿಸಿದರು

ಗಿಡನಡುವ ಮೂಲಕ ಕುಂದಾಪುರ ನಗರ ಮಹಾಶಕ್ತಿಕೇಂದ್ರ ಯುವ ಹಸಿರು ಕಾರ್ಯಕ್ರಮಕ್ಕೆ ಪುರಸಭಾ ಸದಸ್ಯ ಮೋಹನ್ ದಾಸ್ ಶಣೈ, ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ಚಾಲನೆ ನೀಡಿದರು, ಕುಂದಾಪುರ ವಿಧಾನಸಭಾ ಕ್ಷೇತ್ರದ 7 ಮಹಾಶಕ್ತಿ ಕೇಂದ್ರದ “ಯುವ ಹಸಿರು” ಕಾರ್ಯಕ್ರಮವು ಪೂರ್ಣ ಗೊ‌ಂಡಿತು.

 
 
 
 
 
 
 
 
 
 
 

Leave a Reply