ಅಂಬೇಡ್ಕರ್ ಯುವಸೇನೆಯಿಂದ ಶ್ರಮದಾನ

 

ಉಡುಪಿ: ಇಲ್ಲಿಗೆ ಸಮೀಪದ ಕೆಮ್ಮಣ್ಣು ಪಡುಕುದ್ರು ಅಂಬೇಡ್ಕರ್ ಯುವಸೇನೆ ವತಿಯಿಂದ ಪಡುಕುದ್ರು- ತಿಮ್ಮನಕುದ್ರು ಸಂಪರ್ಕ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದ ಗಿಡಗಂಟಿಗಳನ್ನು ಶ್ರಮದಾನದ ಮೂಲಕ ಕೀಳಲಾಯಿತು
ಸುಮಾರು ೨ ಕಿ. ಮೀ. ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದಿರುವ ಹುಲ್ಲು ಮತ್ತು ಗಿಡಗಳಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿತ್ತು.
ಅAಬೇಡ್ಕರ್ ಯುವಸೇನೆ ಅಧ್ಯಕ್ಷ ರಾಜೇಶ್ ನೇತೃತ್ವದಲ್ಲಿ ನಡೆದ ಕರ‍್ಯಕ್ರಮದಲ್ಲಿ ಸುಧಾ, ಉದಯ, ರಾಮದಾಸ್, ರಿತೇಶ್, ಜಯಕರ, ಕಾಂತು, ಹರಿದಾಸ್, ರಮೇಶ್, ರಾಕೇಶ್, ಅವಿನಾಶ್, ಸುಹಾಸ್, ಕೃಷ್ಣ ನಿಖಿಲ್, ಕೌಶಿಕ್, ಪ್ರತೀಕ್, ರವಿ, ನಟರಾಜ್, ಶಿವರಾಮ, ಸಂತು, ಪ್ರಜ್ವಲ್, ಅಶೋಕ್ ಮೊದಲಾದವರು ಭಾಗವಹಿಸಿದ್ದರು.

 
 
 
 
 
 
 
 
 

Leave a Reply