ಸಣ್ಣ ಕೈಗಾರಿಕೆಗಳಿಗೆ ಸರಕಾರದ ನೆರವಿನ ಅಗತ್ಯವಿದೆ: ಕೆ.ಬಿ. ಅರಸಪ್ಪ


ಲಾಕ್ಡೌನ್ ಕಾರಣದಿಂದ ಸಂಕಷ್ಟಕ್ಕೀಡಾ ಗಿರುವ ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ಸರಕಾರದಿಂದ ಹೆಚ್ಚಿನ ನೆರವಿನ ಅಗತ್ಯವಿದೆ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ.ಅರಸಪ್ಪ ಹೇಳಿದ್ದಾರೆ.


ಅವರು ಶನಿವಾರ, ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಲಾಕ್ ಡೌನ್ ನಿಂದ ಕಾರ್ಮಿಕರ ಕೊರತೆ, ಅಗತ್ಯ ಸರಕುಗಳ ಕೊರತೆ ಹಾಗೂ ತೀವ್ರ ಆರ್ಥಿಕ ಅಡಚಣೆ ಎದುರಿಸುತ್ತಿರುವ ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ಸರಕಾರದ ನೆರವಿನ ಅಗತ್ಯವಿದ್ದು, ಶೇ.6 ರ ಬಡ್ಡಿದರ ದಲ್ಲಿ ಸಾಲ ಸೌಲಭ್ಯ, ಎನ್.ಪಿ.ಎ ಖಾತೆ ಗಳಿಗೂ ಸಾಲ ನೀಡಿಕೆ, ಹಾಗೂ ಲಾಕ್ ಡೌನ್ ಪೂರ್ವದಲ್ಲಿ ಪಡೆದಿದ್ದ ಸಾಲಗಳಿಗೆ ಬಡ್ಡಿ ವಿನಾಯತಿ ನೀಡುವ ಮೂಲಕ ಅರ್ಥಿಕ ಬೆಂಬಲ ನೀಡುವದರ ಮೂಲಕ , ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಬೆಂಬಲ ನೀಡಬೇಕು ಎಂದು ಅರಸಪ್ಪ ಹೇಳಿದರು.


ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸರಕಾರದಿಂದ ಕೈಗಾರಿಕಾ ವಲಯಗಳ ಸ್ಥಾಪನೆ ನಡೆಯುತ್ತಿಲ್ಲ, ಮಂಗಳೂರಿನಲ್ಲಿ ಬಂದರು ವ್ಯವಸ್ಥೆ ಇಲ್ಲ. ಇದರ ಪೂರ್ಣ ಪ್ರಯೋಜನ ದೊರೆಯುತ್ತಿಲ್ಲ, ಬೆಂಗಳೂರಿ ನಿಂದ ಮಂಗಳೂರಿಗೆ ಉತ್ತಮ ರಸ್ತೆ ನಿರ್ಮಿ ಸಿದ್ದಲ್ಲಿ ರಾಜ್ಯದಿಂದ ಹೆಚ್ಚಿನ ರಫ್ತು ಮಾಡಲು ಅವಕಾಶವಿದೆ, ಕರಾವಳಿ ಪ್ರದೇಶದಲ್ಲಿ ಆಹಾರ ಸಂಸ್ಕರಣೆ ಉದ್ದಿಮೆಗಳಿಗೆ ಹೆಚ್ಚಿನ ಅವಕಾಶವಿದೆ ಎಂದು ಅರಸಪ್ಪ ತಿಳಿಸಿದರು.


ಉಡುಪಿ ಜಿಲ್ಲೆಯಲ್ಲಿ 15280 ಸಣ್ಣ ಉದ್ದಿ ಮೆಗಳಿದ್ದು, ಸುಮಾರು 117000 ಜನರಿಗೆ ಉದ್ಯೋಗವಕಾಶ ಒದಗಿಸಲಾಗಿದೆ, ಹೊಸ ಉದ್ದಿಮೆಗಳ ಆರಂಭಕ್ಕೆ ಸೂಕ್ತ ಸ್ಥಳಾವಕಾಶ ಮತ್ತು ಅಗತ್ಯ ಮೂಲಭೂತ ಸೌಕರ್ಯ ಗಳನ್ನು ಒದಗಿಸುವಂತೆ ಅವರು ಹೇಳಿದರು.


ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಆರ್.ಜಗದೀಶ್, ಕಾಶಿಯಾ ಜಂಟಿ ಕಾರ್ಯದರ್ಶಿ ಜೈ ಕುಮಾರ್, ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಐ.ಆರ್.ಫೆರ್ನಾಂಡಿಸ್, ಉಪಾಧ್ಯಕ್ಷ ಪ್ರಶಾಂತ್ ಬಾಳಿಗ, ಕಾರ್ಯ ದರ್ಶಿ ವಲ್ಲಭ ಭಟ್ ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply