ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ,ಪಳ್ಳಿ ನಿಂಜೂರು ಸಮೀಪ ಟಿಪ್ಪರ್ ಒಂದು ನೀರಿನ ಹೊಂಡಕ್ಕೆ ಪಲ್ಟಿಯಾಗಿ ಚಾಲಕ ಹಾಗೂ ಮತ್ತೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಗಣಿತ ನಗರದ ನಿವಾಸಿ ಅರುಣ್ ಕುಮಾರ್ ಮೃತಪಟ್ಟ ಟಿಪ್ಪರ್ ಚಾಲಕ ಎಂದು ತಿಳಿದು ಬಂದಿದೆ. ಮತ್ತೊಬ್ಬ ಅವರ ಜೊತೆ ಮೃತಪಟ್ಟಿದ್ದಾರೆ. ಕಾರ್ಕಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.