“ಗೋವಿಗಾಗಿ ಮೇವು” ಹಸಿರು ಹುಲ್ಲಿನ ನೆರವು

ಉಡುಪಿ :- “ಸಕ್ಷಮಾ ಉಡುಪಿ ” ಇದರ ವತಿಯಿಂದ ಸ್ಪoದನ ವಿಶೇಷ ಮಕ್ಕಳ ಪ್ರನರ್ವಸತಿ ಕೇಂದ್ರ ಮತ್ತು ಯುವ ವಿಚಾರ ವೇದಿಕೆ ಇದರ ಸಹಕಾರದಲ್ಲಿ ನೀಲಾವರ ಶ್ರೀ ಪೇಜಾವರ ಮಠದ ಗೋ ಶಾಲೆಗೆ ” ಗೋವಿಗಾಗಿ ಮೇವು ” ಹಸಿರು ಹುಲ್ಲು ನೀಡುವ ಕಾಯ೯ಕ್ರಮ ಆದಿತ್ಯವಾರ ನಡೆಯಿತು.


ಸುರಿಯುವ ಮಳೆಯನ್ನು ಲೆಕ್ಕಿಸದೆ ವಿಶೇಷ ಮಕ್ಕಳು ಮತ್ತು ಸದಸ್ಯರು ಸಂತೆಕಟ್ಟೆ ಕಲ್ಯಾಣಪುರ ರಸ್ತೆಯ ಬದಿಯಲ್ಲಿರುವ ಹುಲ್ಲನ್ನು ಕಟಾವು ಮಾಡಿ ನೀಡಲಾಯಿತು. ಈ ಸಂದಭ೯ದಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀಥ೯ ಶ್ರೀಪಾದರು ತಂಡದ ಸದಸ್ಯರನ್ನು ಗೌರವಿಸಿದರು.

ಕಾಯ೯ಕ್ರಮದಲ್ಲಿ ಮೂಡಬಿದ್ರೆ ಆಳ್ವಾಸ್ ಎಜುಕೇಶನ್ ನ ಡಾ|| ಮೋಹನ್ ಆಳ್ವ , ಬಿಲ್ಲಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಗೋವಿಗಾಗಿ ಮೇವು ಅಭಿಯಾನದ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸ್ಪoದನ ಸಂಸ್ಥೆಯ ಉಮೇಶ್, ಜನಾಧ೯ನ್, ಸಕ್ಷಮಾ ಅಧ್ಯಕ್ಷೆ ಲತಾ ಭಟ್,ಕಾಯ೯ದಶಿ೯ ರಾಘವೇಂದ್ರ ಪ್ರಭು ಕವಾ೯ಲು, ಸುಬ್ರಮಣ್ಯ ಆಚಾಯ೯, ಯೋಗೀಶ್, ಉದಯ ನಾಯ್ಕ ಮುಂತಾದವರಿದ್ದರು.

 
 
 
 
 
 
 
 
 
 
 

Leave a Reply