ಕೊರೊನ ಸೋಂಕಿತ ಯುವಕನ ಅಂತ್ಯ ಸಂಸ್ಕಾರ

ನಾಡೋಜ ಡಾ ಜಿ ಶಂಕರ್ ನೇತೃತ್ವದ ಕೊರೊನ ವಾರಿಯರ್ಸ್ ಸೇವೆ ದಿನಾಂಕ 29-08-2020 ರಂದು ಹಿಂಧೂ ಸಂಪ್ರದಾಯದಂತೆ ಇಂದ್ರಾಳಿ ರುದ್ರ ಭೂಮಿಯಲ್ಲಿ ಕೊರೊನ ಸೋಂಕಿತ ಯುವಕನ ಶವದ ಅಂತ್ಯ ಸಂಸ್ಕಾರ.

ಬ್ರಹ್ಮಾವರದ ಸುಮಾರು 43 ವರ್ಷ ಪ್ರಾಯದ ಯುವಕ ಸುಧೀರ್ ನಾಯಕ್ ಕೊರೊನ ಸೋಕಿನಿಂದ ಮೃತ ಪಟ್ಟಿದ್ದು ಮೃತ ದೇಹವನ್ನು ಮಣಿಪಾಲ ಶವಾಗಾರದಿಂದ ಪಡೆದು ಅವರ ಅಂತ್ಯ ಕ್ರಿಯೆ ಯನ್ನು ಹಿಂದೂ ಸಂಪ್ರದಾಯ ದಂತೆ ಇಂದ್ರಾಳಿ ಹಿಂದೂ ರುದ್ರ ಭೂಮಿ ಯಲ್ಲಿ GS ಉಡುಪಿ ಕೊರೊನ ವಾರಿಯರ್ಸ್ ನೆಡೆಸಿಕೊಟ್ಟರು.ಮೃತರ ಕುಟುಂಬಸ್ಥರು ಮಹಿಳೆಯರೇ ಭಾಗವಹಿಸಿದ ಕಾರಣ ನಮ್ಮ gs ಉಡುಪಿ ಕೊರೊನ ವಾರಿಯರ್ಸ್ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಅನಿವಾರ್ಯತೆ ಒದಗಿ ಬಂತು.

ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶಿವರಾಮ್ ಕೆ ಎಮ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಪುಣ್ಯ ಕಾರ್ಯದ ಸಂಪೂರ್ಣ ಜವಾಬ್ದಾರಿಯನ್ನು ದ ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶ್ರೀಯಾನ್, ಚಂದ್ರೇಶ್ ಪಿತ್ರೋಡಿ, ಉಪಸ್ಥಿತರಿದ್ದರು.ಇಂದಿನ ಸೋಂಕಿತ ಶವದ ಅಂತಕ್ರಿಯೆ ನೆರವೇರಿಸುವಲ್ಲಿ ಕಲ್ಯಾಣಪುರ ಘಟಕದ ಸುರೇಶ ಕುಂದರ್ ಮತ್ತು ದೊಡ್ಡಣ್ಣ ಗುಡ್ಡೆ ಘಟಕದ ಮುರಳಿ ಸಹಕರಿಸಿದರು

 
 
 
 
 
 
 
 
 

Leave a Reply