ಬ್ರಹ್ಮಾವರ: ಇಲ್ಲಿನ ರುಡ್ ಸೆಟ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಯಶಸ್ವೀ ಉದ್ಯಮಿಗಳ ಸಂಘಟನೆ `ಆಸರೆ’ ವತಿಯಿಂದ ಕೋವಿಡ್ 19 ಸಮಸ್ಯೆ ಬಗ್ಗೆ ಜಾಗೃತಿ ಕಾರ್ಯಕ್ರಮ ಈಚೆಗೆ ರುಡ್ ಸೆಟ್ ಸಂಸ್ಥೆಯಲ್ಲಿ ನಡೆಯಿತು.
ರುಡ್ ಸೆಟ್ ನಿರ್ದೇಶಕ ಪಾಪ ನಾಯಕ್ , ಆಸರೆ ಸಂಘಟ ಅಧ್ಯಕ್ಷೆ ಕೆ. ಈಶ್ವರಿ , ಸಂಸ್ಥೆಯ ಹಿರಿಯ ಉಪನ್ಯಾಸಕ ಕರುಣಾಕರ ಜೈನ್, ಸಂತೋಷ ಶೆಟ್ಟಿ, ಆಸರೆ ಸಂಘಟನೆಯ ಮಾಜಿ ಅಧ್ಯಕ್ಷ ಹಾಗೂ ರೋಟರಿ ಮಾಜಿ ಸಹಾಯಕ ಗವರ್ನರ್ ಎಂ. . ಮಹೇಶ್ ಕುಮಾರ್, ಗೌರವಾಧ್ಯಕ್ಷ ರಾಜೇಶ್ ಡಿ., ಕೆ. ಸಿ. ಅಮೀನ್, ಕಾರ್ಯದರ್ಶಿ ಉಮೇಶ್ ಮೊದಲಾದವರಿದ್ದರು.