ಉಡುಪಿ :-ಎಣ್ಣೆಹೊಳೆ ದೇವಾಲಯದ ಸ್ವಣಾ೯ ನದಿಯ ತಟದಲ್ಲಿ ವೈಭವದ ಸ್ವಣಾ೯ರತಿ ಕಾಯ೯ಕ್ರಮ ಡಿ.18 ಶುಕ್ರವಾರ ನಡೆಯಿತು. ಗೋವಾ ಕೈವಲ್ಯ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ರವರು ದೇವಾಲಯದ ಎದುರು ಬಿಲ್ವ ಗಿಡಗಳನ್ನು ನೆಡುವುದರ ಮೂಲಕ ಚಾಲನೆ ನೀಡಿದರು.ನಂತರ ನದಿ ತೀರದಲ್ಲಿ ವೈಭವದ ಸ್ವಣಾ೯ರತಿ ಕಾಯ೯ ನಡೆಯಿತು.ಈ ಸಂದಭ೯ ಸ್ವಾಮೀಜಿಯವರು ಯೋಜನೆಯು ಅತ್ಯಂತ ಯಶಸ್ವಿಯಾಗಲೆಂದು ಆಶೀವ೯ಚನ ನೀಡಿದರು.
ಕಾಯ೯ಕ್ರಮದಲ್ಲಿ ಅಭಿಯಾನದ ಪ್ರಮುಖರಾದ ಡಾII ನಾರಾಯಣ ಶೆಣ್ಯ್ , ಪ್ರಭಾಕರ ಭಟ್ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.
ಸ್ವಣಾ೯ ನದಿಯ ಪಾವಿತ್ರ್ಯ ಮತ್ತು ಸ್ವಚ್ಚತೆಯನ್ನು ಕಾಪಾಡಲು ಈ ನದಿಯ ದಡದಲ್ಲಿ ಬದುಕುತ್ತಿರುವ , ಈ ನದಿಯ ನೀರನ್ನು ಉಪಯೋಗಿಸುತ್ತಿರುವ ಜನರನ್ನು ಪ್ರೇರೇಪಿಸಿ ಅವರಲ್ಲಿ ಈ ಬಗ್ಗೆ ಜಾಗೃತಿ ಮಾಡುವುದು ಈ ಅಭಿಯಾನದ ಧ್ಯೇಯ. ಅ. 2 ರಿಂದ ಪ್ರಾರಂಭವಾದ ಈ ಅಭಿಯಾನ.